ಮಂಡ್ಯ: ಟ್ರಾಫಿಕ್ ಪೊಲೀಸ್ ನಿರ್ಲಕ್ಷ್ಯದಿಂದ ಸ್ಥಳದಲ್ಲೇ ಪ್ರಣಕಳೆದುಕೊಂಡ ಮೂರುವರೆ ಮಗು; ಸಾರ್ವಜನಿಕರ ಆಕ್ರೋಶ

  • 26 May 2025 05:38:36 PM


ಮಂಡ್ಯ: ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ ಮೂರೂವರೆ ವರ್ಷದ ಮಗು ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಸ್ವರ್ಣಸಂದ್ರದ ಹಳೇ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದೆ.

 

ಮದ್ದೂರು ತಾಲೂಕಿನ ಗೊರವನಹಳ್ಳಿಯ ಅಶೋಕ್ ಮತ್ತು ವಾಣಿ ದಂಪತಿಯ ಪುತ್ರಿ ಹೃತೀಕ್ಷಾ ಈ ದುರ್ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

 

 ಹೃತೀಕ್ಷಾಗೆ ನಾಯಿ ಕಚ್ಚಿದ್ದ ಕಾರಣ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ತಾಯಿ–ತಂದೆ ಬೈಕ್‌ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಸ್ವರ್ಣಸಂದ್ರ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗಾಗಿ ಬೈಕ್‌ನ್ನು ಅಡ್ಡಗಟ್ಟಿದ್ದರು ಎಂದೂ ಅನಿರೀಕ್ಷಿತ ಸ್ಥಿತಿಯಲ್ಲಿ ಬೈಕ್ ಬಿದ್ದಿದ್ದು, ಪೋಷಕರೊಂದಿಗೆ ಮಗು ರಸ್ತೆ ಮೇಲೆ ಬಿದ್ದು ತಲೆಗೆ ಬಿದ್ದ ತೀವ್ರ ಪೆತ್ತಿನಿಂದ ರಕ್ತಸ್ರಾವದಿಂದ ಮಗುವು ಸ್ಥಳದಲ್ಲೇ ಕೊನೆಯುಸಿರೆಳೆದ ದುರ್ಘಟನೆ ಸಂಭವಿಸಿದೆ.

 

ಮಗುವನ್ನು ಮಡಿಲಿನಲ್ಲಿಟ್ಟು ಗೋಳಾಡಿದ ದೃಶ್ಯವನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದು ದಿಗ್ಬ್ರಮೆಗೊಂಡ ಸಾರ್ವಜನಿಕ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.