ಬೆಂಗಳೂರು: ಶಿಸ್ತು ಉಲ್ಲಂಘನೆ: ಬಿಜೆಪಿ ಇಬ್ಬರು ಶಾಸಕರನ್ನು 6ವರ್ಷಕ್ಕೆ ಉಚ್ಚಾಟನೆ!

  • 27 May 2025 02:58:45 PM


ಬೆಂಗಳೂರು: ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್ ಮತ್ತು ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು 6 ವ ರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಕೇಂದ್ರ ಸಚಿವ ಸಮಿತಿಯಿಂದ ಅಧಿಕೃತ ಆದೇಶ ಹೊರಡಿಸಿದೆ.

 

 ಪಕ್ಷದ ಶಿಸ್ತು ನಿಯಮಗಳನ್ನು ಪದೇ ಪದೇ ಮೀರಿ ನಡೆದುಕೊಂಡಿದುದರಿಂದ ಮಾರ್ಚ್ ತಿಂಗಳ ಕೊನೆಯಲ್ಲಿ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿತ್ತು. ಆದರೆ ನಿಗದಿತ ಅವಧಿಯಲ್ಲಿ ಸರಿಯಾದ ಉತ್ತರ ನೀಡದ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಹೊರಗಾಕಲಾಗಿದೆ.

 

ಇಬ್ಬರು ಶಾಸಕರು ಬಿರುಸಾಗಿ ಕಾಂಗ್ರೆಸ್ ಸಭೆಗಳಲ್ಲಿ ಪಾಲ್ಗೊಂಡು, ತಮ್ಮದೇ ಪಕ್ಷದ ನಾಯಕರ ವಿರುದ್ಧ ತೀವ್ರವಾಗಿ ಹೇಳಿಕೆಗಳನ್ನು ನೀಡುವುದು ಇವೆಲ್ಲ. ಈ ಎಲ್ಲಾ ಘಟನೆಗಳ ಪರಿಪಕ್ವತೆಯಲ್ಲಿ, ಪಕ್ಷದ ಶಿಸ್ತು ಕಾಪಾಡುವ ಉದ್ದೇಶದಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.