ಹುಟ್ಟುಹಬ್ಬದ ಬೆನ್ನಲ್ಲೇ ಪೊನ್ನಂಪೇಟೆ ಸಿಇಟಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ !

  • 30 May 2025 12:25:11 AM


ಪೊನ್ನಂಪೇಟೆ: ಪೊನ್ನಂಪೇಟೆಯ ಹಳ್ಳಿಗಟ್ಟು ಪ್ರದೇಶದಲ್ಲಿರುವ ಸಿಇಟಿ ಕಾಲೇಜಿನ ಹಾಸ್ಟೆಲ್ ನಲ್ಲಿ ಪ್ರಥಮ ವರ್ಷದ ಎಐಎಂಎಲ್ (ಆर्टಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾದ ತೇಜಸ್ವಿನಿ (19) ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಂಭವಿಸಿದೆ.

 

ತೇಜಸ್ವಿನಿ ರಾಯಚೂರಿನ ಮಹಾಂತಪ್ಪ ಎಂಬವರ ಏಕೈಕ ಪುತ್ರಿಯಾಗಿದ್ದು, ಮೊನ್ನೆಎಷ್ಟೇ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದರು. ಆ ದಿನದಲ್ಲಿ ಭಾಗವಹಿಸದ ಸ್ನೇಹಿತರಿಗೆ ಇಂದು ಕೂಡ ಸಿಹಿ ಹಂಚಿ ತರಗತಿಗೆ ಹಾಜರಾದ ಬಳಿಕ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಹಾಸ್ಟೆಲ್‌ಗೆ ಹಿಂದಿರುಗಿದ್ದಳು. 

 

ಸಂಜೆ ಸುಮಾರು 4:30 ಹಾಗೆ ಸಹಪಾಠಿಯೊಬ್ಬಳು ಹಾಸ್ಟೆಲಿಗೆ ಹೋಗಿ ನೋಡಿದಲ್ಲಿ, ಬಾಗಿಲು ಒಳಗಿನಿಂದ ಲಾಕ್ ಮಾಡಿಕೊಂಡಿದ್ದನ್ನು ಕಂಡು ಅನೇಕ ಬಾರಿ ಕರೆದು ನೋಡಿಯು ಪ್ರತಿಸ್ಪಂದನೆ ಮಾಡದೆ ಇದ್ದಲ್ಲಿ ಈ ವಿಷಯವನ್ನು ಹಾಸ್ಟೆಲ್ ಮೇಲ್ವಿಚಾರಕರಿಗೆ ತಿಳಿಸಿ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುತ್ತದೆ.

 

ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ಕಾರಣವಾದ್ದಾಗಿ ತೇಜಸ್ವಿನಿ ಬರೆದ ಡೆತ್ ನೋಟು ಸಿಕ್ಕಿತು.

 

  ಆ ಡೆತ್ ನೋಟಿನಲ್ಲಿ "ನನ್ನ ಬಳಿ 6 ಬ್ಯಾಕ್‌ಲಾಗ್‌ಗಳಿವೆ. ಮುಂದೆ ನನಗೆ ಓದಲು ಇಚ್ಛೆಇಲ್ಲದಿದ್ದರಿಂದ. ಈ ಕ್ರಮ ತೆಗೆದುಕೊಳ್ಳುತ್ತಿದ್ದೇನೆ," ಎಂದು ಬರೆದಿದ್ದಳು.