ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ ಪ್ರಸಿದ್ಧ ಮಧೂರು ಸಿದ್ದಿವಿನಾಯಕ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ. ದೇವಾಲಯದ ಆವರಣದಲ್ಲಿ ನೀರು ಹರಿದುಬಂದಿದ್ದು, ಸುಮಾರು ಒಂದು ಅಡಿ ಮಟ್ಟದಲ್ಲಿ ನಿಂತಿದೆ.
ಮಳೆಯ ಆರ್ಭಟಕ್ಕೆ ಮಧುವಾಹಿನಿ ಹರಿದು ದೇವಾಲಯ ಆವರಣ ಜಲಾವೃತವಾದ ದೃಶ್ಯಗಳು:
ಪ್ರತಿ ಮಳೆಗಾಲದಲ್ಲಿಯೂ ಮದುವಾಹಿನಿಯಿಂದ ನೀರು ದೇಗುಲದೊಳಗೆ ಹರಿದುಬರುವುದು ನಿತ್ಯದ ಕಥೆ. ಆದರೆ ಈ ಬಾರಿಗೆ ಮೇ ತಿಂಗಳಲ್ಲಿ ಎಷ್ಟು ಪ್ರಮಾಣದ ಮಳೆ ಉಂಟಾಗಿರುವುದು ಅಪರೂಪದ್ದಾಗಿದೆ.
ತೀವ್ರ ಮಳೆಯ ಪರಿಣಾಮವಾಗಿ ಹಲವು ಮುಖ್ಯ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಬಸ್ಸು ಹಾಗೂ ಇತರ ವಾಹನಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಗ್ರಮವಾಸಿಗಳ ಮನೆ ಸುತ್ತ ನೀರು ತುಂಬಿ ಆತಂಕವನ್ನು ಸೃಷ್ಟಿಸಿದೆ.
ಸ್ಥಳೀಯ ಆಡಳಿತವು ಪರಿಸ್ಥಿತಿಯ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಭಕ್ತರು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ಸೂಚಿಸಲಾಗಿದೆ.