ಪುತ್ತೂರು : ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಮಳೆಗಾಲದ ಭೀಕರತೆಯ ಅನಾಹುತವೊಂದು ಸಂಭವಿಸಿದೆ.
ಸಕಲೇಶ್ವರ ದೇವಸ್ಥಾನದ ಬಳಿಯ ಗುತ್ತಿನ ಮನೆ ಬಳಿ ರಸ್ತೆ ಭಾಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಬೆಳ್ಳಿಪ್ಪಾಡಿ ಕಠಾರಿ ಕೋಟೆಲು ಬಾಗವನ್ನು ಸಂಪರ್ಕಿಸುವ ಮುಖ್ಯ ರಸ್ತೆಯು ಸಂಪೂರ್ಣವಾಗಿ ಕುಸಿದು ಹೋದ ಘಟನೆ ಸಂಭವಿಸಿದೆ.
ಈ ಪರಿಣಾಮವಾಗಿ ಗ್ರಾಮೀಣ ಭಾಗದ ಜನರಿಗೆ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ.
ಇದಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಇದೇ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆಯು ಸಹ ಭೂಕುಸಿತ ಸಂಭವಿಸಿತ್ತು ಎಂಬುದಾಗಿ ಆಗಿರುತ್ತದೆ.
ಮೇಲ್ಭಾಗದಲ್ಲಿರುವ ಎರಡು ಮನೆಗಳು ಗಂಭೀರಾವಸ್ತೆಯಲ್ಲಿದ್ದು ಈ ರಸ್ತೆಯಲ್ಲಿ ದಿನಂಪ್ರತಿಯ ಸಂಚರಿಸುವ ವಾಹನಗಳು ಬೇರೆ ಮಾರ್ಗ ಬಳಸಿ ಸಂಚರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಸಂಬಂಧಪಟ್ಟ ಇಲಾಖೆಗಳು ಮತ್ತು ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ತೀವ್ರ ಒತ್ತಾಯ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಪುನರಾವೃತ
ಭೂಕುಸಿತಗಳು ಗ್ರಾಮೀಣ ಮೂಲಸೌಕರ್ಯಗಳ ಮೇಲೆ ಮತ್ತು ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದ್ದು, ಶಾಶ್ವತ ಪರಿಹಾರ ಅಗತ್ಯವಾಗಿದೆ ಎಂಬುದು ಸ್ಥಳೀಯರ ಬೇಡಿಕೆಯೊಡ್ಡಿದ್ದಾರೆ.