ಬದಿಯಡ್ಕ: ಫೇಸ್ಬುಕ್ನಲ್ಲಿ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ರ ವಿರುದ್ಧ ದಾಳಿ ನಡೆಸಬೇಕು ಎಂಬುದಾಗಿ ವಿವಾದಾಸ್ಪದ ಪೋಸ್ಟ್ ಹಾಕಿರುವ ಸಂಬಂಧ ಬದಿಯಡ್ಕ ಮೂಲದ ಅಬ್ದುಲ್ಲ ಮಾದುಮೂಲೆ ವಿರುದ್ಧ ದೂರು ದಾಖಲಾಗಿದೆ.
ಅಬ್ದುಲ್ಲ, ಪ್ರಸ್ತುತ ವಿದೇಶದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ಭಯೋತ್ಪಾದಕರ ವಿರುದ್ಧದ ದಾಳಿಯಂತೆ ದೋವೆಲ್ ಅವರ ಮೇಲೂ ದಾಳಿ ನಡೆಸಬೇಕೆಂದು ಅವನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ನಂತರ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.
ಶಾಂತಿ ಮತ್ತು ರಾಷ್ಟ್ರಭದ್ರತೆಗೆ ಧಕ್ಕೆ ಉಂಟುಮಾಡುವ ಈ ರೀತಿಯ ಈ ಪುಸ್ತಕಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರು ತಕ್ಷಣ ತನಿಖೆ ಮುಂದುವರಿಸಿದ್ದಾರೆ.
ಸ್ಥಳೀಯರು ಇಂತಹ ಅಭಿಪ್ರಾಯಗಳನ್ನು ಖಂಡಿಸುತ್ತಾ ಕಾನೂನು ಪ್ರಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿದ್ಯಾವಂತ ಹಾಗೂ ಸಮಾಜದಲ್ಲಿ ಉನ್ನತ ಮಟ್ಟದಲ್ಲಿರುವಂತಹ ಅಬ್ದುಲ್ಲಾ ಮಾದುಮೂಲೆಯವರಂತಹ ವ್ಯಕ್ತಿಗಳು ಇಂತಹ ಪೋಸ್ಟ್ ಹಾಕಿರುವುದರ ಕುರಿತಾಗಿ ಸ್ಥಳೀಯರು ತೀವ್ರ ಅಸಮಾದಾನ ವ್ಯಕ್ತಡಿಸಿದ್ದಾರೆ.