ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಅಚ್ಚರಿ ಮೂಡಿಸುವ ಘಟನೆಯೊಂದು ಸಂಭವಿಸಿದ್ದು ಇದೀಗ ಆಯಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಆಯತಪ್ಪಿ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ, ಕೆಳಗಡೆ ನಿಂತುಕೊಂಡಿದ್ದ ಕಂಟ್ರಾಕ್ಟರ್ ಗಣೇಶ್ ಎಂಬವರು ಕ್ಷಣಾರ್ಧದಲ್ಲಿ ಕ್ಯಾಚ್ ಹಿಡಿದು ಜೀವ ಉಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ.
https://twitter.com/i/status/1927679393884962867
ಶಂಕರ್ ಎಂಬ ಕಾರ್ಮಿಕನು ಎರಡನೇ ಮಹಡಿಯಲ್ಲಿ ಕಾಂಕ್ರೀಟ್ ಕಿಟಕಿಯನ್ನು ಹೊಂದಿಸುತ್ತಿದ್ದಾಗ ತೂಕ ತಪ್ಪಿ ಕೆಳಕ್ಕೆ ಬೀಳುತ್ತಿದ ಕ್ಷಣದಲ್ಲಿಯೇ ಕೆಳಭಾಗದಲ್ಲಿ ಕೆಲಸದ ಮೇಲ್ವಿಚಾರಣೆಯಲ್ಲಿ ತೊಡಗಿದ್ದ ಗಣೇಶ್, ತನ್ನ ಜಾಗ್ರತೆ ಮತ್ತು ಧೈರ್ಯದೊಂದಿಗೆ ಶಂಕರ್ನ್ನು ಕೈ ಹಿಡಿದು ನಿಲ್ಲಿಸುತ್ತಾರೆ.
ಈ ವೇಳೆ ಇಬ್ಬರೂ ನೆಲಕ್ಕೆ ಬಿದ್ದು ಎದುರಾದ ಮಹತ್ತರ ಅಪಾಯವೊಂದನ್ನು ಅದೃಷ್ಟವಶಾತ್ ತಪ್ಪಿಹೋಗಿದೆ. ಈ ದೃಶ್ಯವು ಪಕ್ಕದ ಕಟ್ಟಡದ ಸಿಸಿಟಿವಿಯಲ್ಲಿ ಈ ದೃಶ್ಯವು ಸ್ಪಷ್ಟವಾಗಿ ಸೆರೆಯಾಗಿದೆ.
ಈ ಘಟನೆಯಲ್ಲಿ ಶಂಕರ್ಗೆ ಯಾವುದೇ ಗಾಯಗಳಾಗಿಲ್ಲ. ಗಣೇಶ್ ಅವರ ಬಲ ಕಾಲಿಗೆ ತುಸು ಪೆಟ್ಟಾಗಿದರೂ, ಬಲವಾಗಿ ಬೆಲ್ಟ್ ಹಾಕಿಕೊಂಡಿದ್ದ ಕಾರಣ ದೊಡ್ಡ ಅಪಾಯ ತಪ್ಪಿದೆ.
ದುಡಿಮೆ ವೇಳೆ ದೇವರ ಕೃಪೆಯಿಂದ ಬದುಕು ಉಳಿದಿದೆ ಎಂದು ಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರೂ ಕೂಡ ಕಳೆದ 25 ವರ್ಷಗಳಿಂದ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರಾಗಿದ್ದು ಈ ಸಾಹಸಕಾರಿ ಘಟನೆ, ಅವರ ಅನುಭವ ಮತ್ತು ಮಾನವೀಯ ಮೌಲ್ಯಗಳ ಸ್ಫೂರ್ತಿದಾಯಕ ಉದಾಹರಣೆಯಾಗಿದೆ.