ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಈ ನಡುವೆ ಸಂಭವಿಸಿರುವ ಭೀಕರ ಭೂಕುಸಿತದಿಂದ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸಿದ್ದು, ಬೆಳ್ಳಿಪ್ಪಾಡಿ, ಹರಿನಗರ, ಶಾಂತಿನಗರ, ಪಾಣಂಬು, ಉಪ್ಪಿನಂಗಡಿ, ಹಿರೇಬಂಡಾಡಿ, ಮುಂಡೂರು, ಪುರುಷರಕಟ್ಟೆ ಸೇರಿದಂತೆ ಹಲವೆಡೆ ಪರಿಸ್ಥಿತಿ ಗಂಭೀರವಾಗಿದೆ.
ಈ ವಿಪತ್ತಿನ ಪ್ರಮಾಣ ಅರ್ಥೈಸಿಕೊಂಡ ಅರುಣ್ ಕುಮಾರ್ ಪುತ್ತಿಲ ಅವರು ಸ್ಥಳಗಳಿಗೆ ಭೇಟಿ ನೀಡಿ ಪೀಡಿತ ಪ್ರದೇಶಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.
ವಿಶೇಷವಾಗಿ ಬೆಳ್ಳಿಪ್ಪಾಡಿಯ ಗುತ್ತಿನಮನೆಯಲ್ಲಿ ನಡೆದ ಅಸಮರ್ಪಕ ರಸ್ತೆ ಕಾಮಗಾರಿಯಿಂದ ಧರೆ ಕುಸಿದು ಮನೆಯು ಅಪಾಯದ ಪರಿಸ್ಥಿತಿಯಲ್ಲಿದೆ.
ಪಾಣಂಬು ಗ್ರಾಮದ ಪ್ರಗತಿಪರ ಕೃಷಿಕ ವಸಂತರವರ ತೋಟದಲ್ಲಿ ಸಂಭವಿಸಿರುವ ಭೂಕುಸಿತದಿಂದ 250ಕ್ಕೂ ಹೆಚ್ಚು ಅಡಿಕೆ ಸಸಿಗಳು ನಾಶವಾಗಿ ಹೋಗಿದೆ. ಭಾರೀ ಮಳೆಯಿಂದ ಬೆಟ್ಟವೊಂದು ಸಂಪೂರ್ಣವಾಗಿ ಧರೆಗುರುಳಿ ಅಪಾರ ಕೃಷಿ ನಷ್ಟಕೂಡ ಸಂಭವಿಸಿರುತ್ತದೆ.
ಶಾಂತಿನಗರ, ಹರಿನಗರ, ದೇವಸ್ಯ, ಕೋಡಿಯಡ್ಕ, ರೆಂಜಾಜೆ ಮೊದಲಾದ ಪ್ರದೇಶಗಳಲ್ಲಿ ಮನೆಗಳಿಗೆ ಭೂಸ್ಲೈಡ್ಗಳಿಂದ ಅಪಾಯ ಎದುರಾಗಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.
ಈ ಮಧ್ಯೆ, ಇಷ್ಟು ಭೀಕರ ದುರ್ಘಟನೆ ಸಂಭವಿಸಿದ್ದು ಕೂಡ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಎಸಿ ಅಥವಾ ತಹಶೀಲ್ದಾರ್ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಅರುಣ್ ಪುತ್ತಿಲ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಸಿಗಬೇಕಾದ ಪರಿಹಾರ ಹಣವನ್ನೂ ನೀಡದೆ ಇರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಬಯಲಿಗೆ ತರುತ್ತದೆ ಎಂದು ಅವರು ಆರೋಪಿಸಿದರು.
ಸರ್ಕಾರದ ಈ ನಿರ್ಲಕ್ಷ್ಯಮನೋಭಾವ ಮತ್ತು ದುರಾಡಳಿತ ಅಧಿಕಾರಿ ವರ್ಗ ಕಚೇರಿಗಳಲ್ಲಿಯೇ ಬೆಚ್ಚಗೆ ಕುಳಿತಿರುವುದು ದುಃಖದ ಸಂಗತಿ” ಎಂದು ಪುತ್ತಿಲ ಪ್ರತಿಕ್ರಿಯೆ ನೀಡಿದ್ದಾರೆ.