ವಿಟ್ಲ: ಉದಾರ ಹೃದಯಗಳ ಸಹಕಾರದಿಂದ ಗೀತಾ ಅವರಿಗೆ ನವಜೀವನ ; ಮನದಾಳದ ಕೃತಜ್ಞತೆ ಸಲ್ಲಿಸಿದ ಗೀತ!

  • 02 Jun 2025 05:37:48 PM


ವಿಟ್ಲ: ಚಂದಳಿಕೆಯಲ್ಲಿ ವಾಸವಿರುವ ಗೀತಾ ಅವರು ಇತ್ತೀಚೆಗೆ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಆರೋಗ್ಯದಲ್ಲಿ ಏರುಪೇರಾಗಿ ಅವರು ಚಿಕಿತ್ಸೆಗಾಗಿ ನಿರಂತರ ಹೋರಾಟ ನಡೆಸಿದ್ದರು. 

 

ಈಗ, ಒಬ್ಬ ಉದಾರ ಮನಸ್ಸಿನ ದಾನಿಯ ಸಹಾಯದಿಂದ ಅವರಿಗೆ ಅಗತ್ಯವಾದ ಕಿಡ್ನಿ ದೊರೆತಿದ್ದು, ಯಶಸ್ವಿಯಾಗಿ ಪರಿಚರಣೆಯಿಂದ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದಾರೆ.

 

 ಇದು ಅತ್ಯಂತ ಸಂತಸದ ವಿಷಯವಾಗಿದ್ದು ಗೀತಾ ಅವರ ಈ ಪುನರ್ಜನ್ಮಕ್ಕೆ ಸಹಕರಿಸಿದಂತಹ ಎಲ್ಲರಿಗೂ ಅವರು ಹಾಗೂ ಅವರೂ ಮತ್ತು ಕುಟುಂಬದವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

 

ಅವರ ಚಿಕಿತ್ಸೆಗೆ ಧನ ಹಾಗೂ ವಸ್ತು ರೂಪದಲ್ಲಿ ಕೈಜೋಡಿಸಿದ ಎಲ್ಲ ದಾನಿಗಳಿಗೂ ಬಂಧುಮಿತ್ರ, ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ನೇಹಿತರಿಗೆ ಗೀತಾ ಅವರು ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.