ಕಡಬ: ವಿಶ್ವ ಹಿಂದೂ ಪರಿಷತ್ (ವಿಹಿಪ) ಕಾರ್ಯಕರ್ತರ ಮನೆಗಳಿಗೆ ಪೋಲೀಸರಿಂದ ನಿರಂತರ ಭೇಟಿ ಮತ್ತು ಫೋಟೋ ತೆಗೆಯುತ್ತಿದ್ದ ಹಿನ್ನಲೆಯಲ್ಲಿ ಕಡಬದ ಎಲ್ಲಾ ವಿಹಿಪ ಕಾರ್ಯಕರ್ತರು ಸಂಘಟಿತವಾಗಿ ಪೋಲೀಸ್ ಠಾಣೆಗೆ ತೆರಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಕಾರ್ಯಕರ್ತರು ಸ್ಪಷ್ಟವಾಗಿ, ನಾವು ಯಾವ ತಪ್ಪು ಮಾಡಿಲ್ಲ ಆದರೂ ಪೋಲೀಸರು ನಮ್ಮ ಮನೆಗೆ ಬಂದು ಫೋಟೋ ತೆಗೆಯುವುದು ಅನವಶ್ಯಕ. ಬೇಕಾದರೆ ನಾವು ಎಲ್ಲರೂ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ ತನಕ ಕುಳಿತೇ ಇರುತ್ತೇವೆ ಎಷ್ಟು ಬೇಕಾದರೂ ಫೋಟೋ ತೆಗೆದುಕೊಳ್ಳಿ,” ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ನಂತರ, ಕಾರ್ಯಕರ್ತರು ನಾಳೆಯಿಂದ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿಯೂ ಇದೇ ರೀತಿಯ ಪ್ರತಿಕ್ರಿಯೆ ನೀಡಲು ತೀರ್ಮಾನಿಸಿದೆ ಎಂದು ತಿಳಿಸಿದೆ.