ಪುತ್ತೂರು:ಸಂಘಪರಿವಾರ ನಾಯಕರು ಪೊಲೀಸ್ ರ ಟಾರ್ಗೆಟ್ – ಕಾಂಗ್ರೆಸ್ ಸರ್ಕಾರದ ಈ ಕ್ರಮ ಖಂಡನೀಯ: ಅರುಣ್ ಪುತ್ತಿಲ

  • 02 Jun 2025 07:31:42 PM


ಪುತ್ತೂರು: SDPI ಮಾತು ಕೇಳಿ ಸಂಘಪರಿವಾರದ ಪ್ರಮುಖರನ್ನು ಪೊಲೀಸ್ ಇಲಾಖೆಯ ಮೂಲಕ ಟಾರ್ಗೆಟ್ ಮಾಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಗೆ ತೀವ್ರ ಖಂಡನೀಯ.

 

ಇತ್ತಿಚಿನ ಕೆಲವು ಘಟನೆಗಳನ್ನು ಆಧರಿಸಿ ನೋಡುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರನ್ನೇ ಗುರಿಯಾಗಿಸಿ ಕೇಸ್ ಜಡಿಯುವ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆಯುತ್ತಿರುವುದು ಕಾಣಬಹುದು. ಕಾಂಗ್ರೇಸ್ ಸರಕಾರದ ಈ ರೀತಿಯ ಕೆಲಸ ಖಂಡನೀಯ ಎಂದು ಅರುಣ್ ಪುತ್ತಿಲ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸುಹಾಸ್ ಶೆಟ್ಟಿ ಶ್ರದ್ದಾಂಜಲಿ ಭಾಷಣ ನೆಪದಲ್ಲಿ ಸಂಘ ಪರಿವಾರದ ಹಿರಿಯರಿಗೆ, ಎನ್ ಐ ಎ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮುಖಂಡರ ಮೇಲು ಕೇಸ್ ದಾಖಲಿಸಲಾಗಿದೆ.

 

ಮಧ್ಯರಾತ್ರಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮನೆಗೆ ನುಗ್ಗಿ ಜಿಪಿಎಸ್ ಪೋಟೋ ತೆಗೆಯುವ ಮೂಲಕ ಮಲಗಿರುವ ಮನೆ ಮಂದಿಗೂ ಹಿಂಸೆ ನೀಡಿವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ .

 

 

ಈ ಎಲ್ಲಾ ಘಟನೆಗಳು ಸಂಭವಿಸಿರುವುದು ಸಂಘ ಪರಿವಾರದ ಕಡು ವಿರೋಧಿ ಬಿ.ಕೆ ಹರಿಪ್ರಸಾದ್ ರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾದ ನಂತರ ನಡೆದಿರುವತಹದ್ದು. ಸಂಘಪರಿವಾರದ ನಾಯಕರನ್ನು ಭಯೋತ್ಪಾದಕರ ರೀತಿ ಬಿಂಬಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿದೆ.

 

ಕಾಂಗ್ರೇಸ್ ಸರ್ಕಾರ SDPI ನಾಯಕರ ಬೆದರಿಕೆಗೆ ಹೆದರಿ ಹಿಂದೂ ನಾಯಕ ಶರಣ್ ಪಂಪ್ವೆಲ್ ರನ್ನು ಬಂಧಿಸಿರುತ್ತದೆ.

 

 ಆದರೆ ಗೌರವಾನ್ವಿತ ನ್ಯಾಯಲಯ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಿರುವುದು ನ್ಯಾಯವನ್ನು ಎತ್ತಿ ಹಿಡಿಯುದರ ಮೂಲಕ ಸಂಘ ಪರಿವಾರ ವಿರೋಧಿ ಸಿದ್ದರಾಮಯ್ಯ ಸರ್ಕಾರಕ್ಕೆ ಕಪಾಲಮೋಕ್ಷ ಮಾಡಿದಂತಾಗಿದೆ ಎಂದು ಹೇಳಿದರು.

 

ಹಿಂದೂ ಕಾರ್ಯಕರ್ತರನ್ನು ಮಾತ್ರ ಟಾರ್ಗೆಟ್ ಮಾಡುವ ಕಾಂಗ್ರೇಸ್ ಸರ್ಕಾರದ ನಡೆ ಖಂಡನೀಯವಾದುದು ಇದನ್ನು ತಕ್ಷಣ ನಿಲ್ಲಿಸುವ ಕೆಲಸ ಆಗಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಅವರು ಆಗ್ರಹ ವ್ಯಕ್ತಪಡಿಸಿದ್ದಾರೆ.