ಪೈವಳಿಕೆ: ಪೈವಳಿಕೆ ಗ್ರಾಮಪಂಚಾಯತ್ ವ್ಯಾಪ್ತಿಯ ಸಜಂಕಿಲದಲ್ಲಿ ನಿಗದಿಯಾಗಿದ್ದ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ ಪಕ್ಷದ ಆಂತರಿಕ ಗೊಂದಲದಿಂದ ರದ್ದುಪಡಿಸಲಾಗಿದೆ.
ಜಿಲ್ಲಾ ಅಧ್ಯಕ್ಷರ ತೀರ್ಮಾನವನ್ನು ವಿರೋಧಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಧ್ಯಕ್ಷರನ್ನು ಘೆರಾವು ಮಾಡಿ ಘೋಷಣೆ ಕೂಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಪೈವಳಿಕೆ ಬಿಜೆಪಿ ನೇತಾರ ಹಾಗೂ ಮಂಡಲ ಸಮಿತಿಯ ಸದಸ್ಯರಾಗಿರುವ ಕೆ.ಪಿ. ಪ್ರಶಾಂತ್ ಅವರನ್ನು ಯಾವುದೇ ತನಿಖೆ ನಡೆಸದೇ, ಸ್ವ ಇಚ್ಚೆಯಂತೆ ಅಧಿಕಾರ ದುರುಪಯೋಗ ಮಾಡಿ ಅಮಾನತುಗೊಳಿಸಿದ ಆರೋಪ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದೆ.
ಇದನ್ನು ಖಂಡಿಸಿ ಕಾರ್ಯಕರ್ತರು ಪೈವಳಿಕೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಪಕ್ಷದ ಜಿಲ್ಲಾ ಪ್ರಚಾರ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ವರದಿಯಾಗಿದ್ದು, ಕಾರ್ಯಕರ್ತರು “ಪಕ್ಷವು ಎಲ್ಲರಿಗೂ ಸಮಾನವಾಗಿದೆ, ಕೆಲವು ನಾಯಕರಿಗೆ ಖಾಸಗಿ ವೇದಿಕೆಯಲ್ಲ” ಎಂದು ಎಚ್ಚರಿಸಿದ್ದಾರೆ.
ಕಾರ್ಯಕರ್ತರನ್ನು ಅಮಾನತು ಮಾಡಿದ ವಿಚಾರವಾಗಿ ಕೂಡಲೇ ಇತ್ಯರ್ಥ ಆಗಬೇಕೆಂದು ಅಮಾನತು ವಾಪಸ್ ಪಡೆಯಬೇಕೆಂದು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ಹಾಗೂ "ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿದವರ ಕೊಡುಗೆ ಏನು?" ಎಂಬ ಪ್ರಶ್ನೆಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕಿಡಿಕಾರಿದ್ದಾರೆ.