ಬೆಳ್ತಂಗಡಿ: ಧರ್ಮದ ಸೇವೆಗೆ ಪುರಸ್ಕಾರವೇ ಗಡಿಪಾರ??ತಿಮರೋಡಿಯಲ್ಲಿ ಹಿಂದೂ ಜಾಗರಣ ವೇದಿಕೆಯ ತುರ್ತು ಸಭೆ

  • 03 Jun 2025 04:20:45 PM


ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು ಘಟಕದ ಪ್ರಮುಖ ಮುಖಂಡರಾಗಿರುವ ಶ್ರೀ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಘಟನೆಯ ಸಂಚಾಲಕರಾದ ಶ್ರೀ ಮನೋಜ್ ಕುಂಜರ್ಪ ಇವರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗಡಿಪಾರು ಆದೇಶ ಹೊರಡಿಸಲಾಗಿದೆ. 

 

ಈ ಕ್ರಮವನ್ನು ಸಂಘಟನೆಯ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಇದು ಏಕಪಕ್ಷೀಯ ಹಾಗೂ ಅನ್ಯಾಯಾತ್ಮಕ ನಿರ್ಧಾರ ಎಂದು ಆಕ್ರೋಶಗೊಂಡಿದ್ದಾರೆ .

 

ಮಹೇಶ್ ಶೆಟ್ಟಿಯವರು ಕಳೆದ 35 ವರ್ಷಗಳಿಂದ ನಿಸ್ವಾರ್ಥವಾಗಿ ಸನಾತನ ಹಿಂದೂ ಧರ್ಮದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಧರ್ಮರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದವರು ಆದರೂ ಇಂತಹ ಧಾರ್ಮಿಕ ಮುಖಂಡರನ್ನು"ರೌಡಿ ಲೀಸ್ಟ್ ಪಟ್ಟ ಕಟ್ಟಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

 

ಈ ಹಿನ್ನೆಲೆಯಲ್ಲಿ ಇಂದು ಸಂಜೆ 5:30 ಗಂಟೆಗೆ ಶ್ರೀ ಕ್ಷೇತ್ರ ತಿಮರೋಡಿ ಕುಂಜರ್ಪದಲ್ಲಿ ಸಂಘಟನೆಯ ತುರ್ತು ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಸಂಘಟನೆಯ ಎಲ್ಲಾ ಕಾರ್ಯಕರ್ತರಿಗೆ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

 

ಸಂಘಟನೆಯು ಸ್ಪಷ್ಟವಾಗಿ ಈ ನಿರ್ಧಾರವನ್ನು ಖಂಡಿಸುತ್ತಿದ್ದು, ಮಹೇಶ್ ಶೆಟ್ಟಿ ಹಾಗೂ ಮನೋಜ್ ಕುಂಜರ್ಪ ಅವರಿಗೆ ನ್ಯಾಯ ದೊರಕುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದೆ.