ಹಾನಗಲ್ಲ: ಬಕ್ರೀದ್ ಹಬ್ಬದ ದಿನ ಗೋಹತ್ಯೆ ತಡೆಯಲು ಕ್ರಮಕೈಗೊಳ್ಳಿ: ಹಿಂದೂ ಜಾಗರಣಾ ವೇದಿಕೆಯ ಹಾನಗಲ್ಲ ಪೊಲೀಸರಿಗೆ ಮನವಿ!

  • 03 Jun 2025 04:27:52 PM


ಹಾನಗಲ್ಲ: ಜೂನ್ 7ರಂದು ನಡೆಯಲಿರುವ ಬಕ್ರೀದ ಹಬ್ಬದ ಹಿನ್ನೆಲೆಯಲ್ಲಿ ಹಾನಗಲ್ಲ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಗೋಹತ್ಯೆ ನಡೆಯದಂತೆ ತಡೆಗಟ್ಟುವ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣಾ ವೇದಿಕೆ ಹಾವೇರಿ ಜಿಲ್ಲೆಯ ಶಾಖೆಯಿಂದ ಹಾನಗಲ್ಲ ಠಾಣೆ ಸಿ.ಪಿ.ಐ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

 

 ಬಕ್ರೀದ ಹಬ್ಬದ ನಿಮಿತ್ತವಾಗಿ ಹಾನಗಲ್ಲ, ಅಕ್ಕಿಆಲೂರ, ನರೇಗಲ್ಲ ಸೇರಿದಂತೆ ತಾಲ್ಲೂಕಿನ ವಿವಿದೆಡೆ ನೂರಾರು ಗೋವುಗಳನ್ನು ತೆಗೆದುಕೊಂಡು ಬರುವ ಮೂಲಕ ಗೋಹತ್ಯೆಗೆ ಸಿದ್ಧತೆ ನಡೆಯುತ್ತಿದೆ.

 

 ಹಾಗಾಗಿ ಒಂದು ವೇಳೆ ಪರವಾನಿಗೆ ಇಲ್ಲದ್ದಲ್ಲಿ ಗೋವುಗಳನ್ನು ರಕ್ಷಿಸಿ, ಪರವಾನಿಗೆ ಇಲ್ಲದೆ ಕಟ್ಟಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಂಘಟನೆ ಈ ಸಂದರ್ಭದಲ್ಲಿ ಒತ್ತಾಯಿಸಿದೆ. 

 

ಗೋವುಗಳನ್ನು ಕಟ್ಟಿ ಇರಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವೇದಿಕೆ ಒತ್ತಾಯಿಸಿದೆ.

 

ಇದೇ ಸಂದರ್ಭದಲ್ಲಿ, ಗೋಹತ್ಯೆ ಹಾಗೂ ಅಕ್ರಮ ಗೋ ಸಾಗಣೆ ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸುವಂತೆ, ಬಿಗಿ ಕ್ರಮ ಕೈಗೊಳ್ಳ ಬೇಕೆಂದು ಸಂಘಟನೆ ಆಗ್ರಹಿಸಿದೆ.