ಸಕಲೇಶಪುರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ಹಾಗೂ ಗಡಿಪಾರು ಕ್ರಮಗಳ ವಿರುದ್ಧ ಹಿಂದೂ ಮುಖಂಡ ರಘು ಸಕಲೇಶಪುರ ಅವರು ಮಾನ್ಯ ಪೊಲೀಸ್ ಮಹಾನಿರ್ದೇಶಕರು (DGP), ಕರ್ನಾಟಕ ರಾಜ್ಯ ರವರಿಗೆ ಮನವಿ ಸಲ್ಲಿಸಿದ್ದಾರೆ.
ಸಕಲೇಶಪುರ ಉಪವಿಭಾಗದ ಮಾನ್ಯ ಉಪ ಪೊಲೀಸ್ ಅಧೀಕ್ಷಕರ ಮುಖಾಂತರ ಈ ಮನವಿ ರವಾನೆ ಮಾಡಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಶ್ರೀ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡದ ಜಿಲ್ಲಾ ಎಸ್ಪಿ ಖಡಕ್ ಅಧಿಕಾರಿಗಳಾಗಿದ್ದರೂ, ಹಿಂದೂ ಕಾರ್ಯಕರ್ತರ ಮನೆಗೆ ರಾತ್ರಿ ಭೇಟಿ ನೀಡಿ ತೀವ್ರ ನಿಂದನೆ ಹಾಗೂ ಬೆದರಿಕೆ ನೀಡುತ್ತಿರುವ ಪೋಲಿಸ್ ನಡವಳಿಕೆ ಜನಸಾಮಾನ್ಯರಲ್ಲಿ ಭೀತಿಯ ವಾತಾವರಣವನ್ನು ಹುಟ್ಟುಹಾಕುತ್ತಿದೆ ಎಂಬ ಗಂಭೀರ ಆರೋಪಗಳನ್ನು ಈ ಮನವಿಯಲ್ಲಿ ದಾಖಲಿಸಲಾಗಿದೆ.
ಶಾಂತಿ ಕಾಪಾಡುವ ಹೆಸರಿನಲ್ಲಿ ಹಿಂದೂ ಸಂಘಟನೆಗಳನ್ನು ಗುರಿಯಾಗಿಸಿ ದಬ್ಬಾಳಿಕೆ ನಡೆಸುತ್ತಿರುವುದರ ಕುರಿತಾಗಿ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.
ಕಲ್ಲಡ್ಕದ ಡಾ. ಶ್ರೀ ಪ್ರಭಾಕರ್ ಭಟ್ ಅವರ ಮೇಲೆ ವಿನಾ ಕಾರಣ ಪ್ರಕರಣ ದಾಖಲಿಸಿ ಸಮಾಜವನ್ನು ಪ್ರಚೋದಿಸುವ ರೀತಿಯಲ್ಲಿ ವರ್ತಿಸಿದ ವಿಧಾನವನ್ನು ಖಂಡನೀಯ.
ಜೊತೆಗೆ 2023ರ ಪುತ್ತೂರು ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತಿ ಹೆಚ್ಚು ಮತ ಪಡೆದ ಅರುಣ್ ಕುಮಾರ್ ಪುತ್ತಿಲ ಅವರನ್ನು ಕಲಬುರ್ಗಿಗೆ ಗಡಿಪಾರು ಮಾಡಲು ರೂಪಿಸಲಾದ ಸಂಚು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಬಜರಂಗದಳ ಸಂಯೋಜಕ, ಕಡಬ ಪ್ರದೇಶದ ಕಾರ್ಯಕರ್ತರ ಮೇಲಿನ ದೌರ್ಜನ್ಯ ಪ್ರಶ್ನೆಗೊಳಪಡುವಂತದ್ದು
ಬಜರಂಗದಳದ ಜಿಲ್ಲಾ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಭರತ್ ಕುಂಡ್ಹೇಲ್ ಅವರನ್ನು ಸಹ ಗಡಿಪಾರು ಮಾಡಲು ಯತ್ನಿಸುತ್ತಿರುವುದನ್ನು ಖಂಡಿಸಲಾಗಿದೆ.
ಕಡಬದಲ್ಲಿ ವಿವಿಧ ಕಾರ್ಯಕರ್ತರ ಮನೆಗೆ ರಾತ್ರಿ ಭೇಟಿ ನೀಡಿ ಅವ್ಯಾಚ ಶಬ್ದಗಳಿಂದ ನಿಂದನೆ ಹಾಗೂ ಬೈಗುಳ ನೀಡುತ್ತಿರುವುದರ ಬಗ್ಗೆ ಕಿಡಿಕಾರಲಾಗಿದೆ.
ಪೊಲೀಸ್ ಠಾಣೆಗೆ ಈ ಬಗ್ಗೆ ಪ್ರಶ್ನಿಸಲು ಹೋದ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಿರುವುದು ಅನ್ಯಾಯ ಎಂಬುದಾಗಿ ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
GPS ಮಾಹಿತಿ ಬಹಿರಂಗಗೊಳಿಸುವ ಮೂಲಕ ಕಾರ್ಯಕರ್ತರ ಮಾಹಿತಿ ಹರಡುತ್ತಿರುವುದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಎಂಬುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.
ಸಾಮಾಜಿಕ ಸಾಮರಸ್ಯದ ಭದ್ರತೆಗೆ ಜಾತಿ-ಧರ್ಮದ ಮುಖಂಡರೊಂದಿಗೆ ಸಭೆ ನಡೆಸಿ ಶಾಂತಿ ಕಾಪಾಡುವ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಬೇಕೆಂದು ಸೂಚಿಸಿದೆ.
ಗಡಿಪಾರು ಕ್ರಮಗಳನ್ನು ಪುನರ್ಪರಿಶೀಲಿಸಿ, ಹಿಂದೂ ಕಾರ್ಯಕರ್ತರ ಹಕ್ಕುಗಳನ್ನು ರಕ್ಷಿಸುವಂತೆ ಮಾನ್ಯ ಮಹಾನಿರ್ದೇಶಕರಿಗೆ ಈ ಮೂಲಕ ಮನವಿ ಮಾಡಲಾಗಿದೆ.
ಆದ್ದರಿಂದ ದಯಮಾಡಿ ಮೇಲ್ಕಂಡ ಎಲ್ಲ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಿ ಜನಸಾಮಾನ್ಯರು ನೆಮ್ಮದಿಯಿಂದ ಸ್ವತಂತ್ರವಾಗಿ ಓಡಾಡಲು ಅವಕಾಶ ಮಾಡಲು ಸೂಕ್ತ ಕ್ರಮ ಜರಗಿಸುವಂತೆ ಆದೇಶಿಸಬೇಕು ಎಂಬುದಾಗಿ ಮನವಿ ಮೂಲಕ ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾವೇದಿಕೆ ಸಕಲೇಶಪುರದ ಸಂಚಾಲಕ ಶಿವೂ ಜಿಪ್ಪಿ ಮತ್ತು ದೀಲಿಪ ಕೆರೋಡಿ ಅವರು ಕೂಡ ಉಪಸ್ಥಿತಿರಿದ್ದರು