ಸಕಲೇಶಪುರ: ಸಕಲೇಶಪುರ ಗ್ರಾಮಾಂತರ ಹಾಗೂ ನಗರ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಮಾರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ.
ಇತ್ತೀಚೆಗೆ ಬೆಳ್ಳಂಬೆಳಿಗ್ಗೆ ಬಕ್ರಿದ್ ಹಬ್ಬದ ಹಿನಲ್ಲೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತೊಂದು ಅಕ್ರಮ ಕೃತ್ಯವನ್ನು ಪತ್ತೆ ಹಚುದರಲ್ಲಿ ಯಶಸ್ವಿಯಾಗಿದ್ದಾರೆ.
ಹಾನುಬಾಳ್ ಭಾಗದಿಂದ ಬರುತ್ತಿದ್ದ KA42 B 4431 ಸಂಖ್ಯೆಯ ಅಶೋಕ್ ಲೆಯ್ಲಂಡ್ ವಾಹನವನ್ನು ಕಾರ್ಯಕರ್ತರು ನಗರದ ಕೆಂಪೆಗೌಡ ಪುತ್ತಳಿಯ ವೃತ್ತದ ಬಳಿ ತಡೆದು ನಿಲ್ಲಿಸಿ ವಾಹನವನ್ನು ಪರಿಶೀಲಿಸಿದಾಗ ಆರು ಗೋವುಗಳನ್ನು ಅತ್ಯಂತ ಹಿಂಸಾತ್ಮಕವಾದ ರೀತಿಯಲ್ಲಿ ತುಂಬಲಾಗಿದ್ದ ದೃಶ್ಯ ಕಂಡುಬಂತು.
ಸಂಘಟನೆಯ ಮಾಹಿತಿ ಮೇರೆಗೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ವಾಹನವನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ಇಂತಹ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.