ಪುತ್ತೂರು: ಆರ್ಲಪದವು ಪಾಣಾಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ (ರಿ) ಇದರ 49ನೇ ಯೋಜನೆಯಡಿ ಉಕ್ಕುಡ ಅಲಂಗಾರು ಪೂಜಾ ಕಟ್ಟೆ ವಿಟ್ಲ ನಿವಾಸಿ ಶ್ರೀ ರಮೇಶ್ ಆಚಾರ್ಯರಿಗೆ ₹16,500 ಹಣ ಸಹಾಯಧಾನವಾಗಿ ಹಸ್ತಾಂತರಿಸಲಾಯಿತು. ಈ ಧನಸಹಾಯ ಟ್ರಸ್ಟ್ನ ದಾನಿಗಳಿಂದ ಸಂಗ್ರಹಿಸಲಾಯಿತು.
ಈ ಮೊತ್ತದಲ್ಲಿ ₹6,500 ಹಣವನ್ನು ಪುತ್ತೂರಿನ ಹೆಸರಾಂತ ಸಂಸ್ಥೆಗಳಾದ "ರಾಧಾಸ್ ಬಟ್ಟೆ ಮಳಿಗೆ" ಹಾಗೂ "ಮುಳಿಯ ಜ್ಯುವೆಲ್ಲರ್ಸ್" ಸಿಬ್ಬಂದಿಗಳು ಸಂಗ್ರಹಿಸಿ ಸಮಾಜಮುಖಿ ಉದ್ದೇಶಕ್ಕಾಗಿ ಕೈಜೋಡಿಸಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ನ ಗೌರವ ಸದಸ್ಯರಾದ ವಿಶ್ವನಾಥ್ ಪೂಜಾರಿ (ಆಳಿಕೆ ವಿಟ್ಲ), ನವೀನ್ (ಸಿಟಿಗುಡ್ಡೆ), ರವೀಂದ್ರ ರೈ (ಕೊಂಡೆಪ್ಪಾಡಿ), ರಂಜಿತ್, ಯೋಗೀಶ್ (ರಾಧಾಸ್) ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸದಸ್ಯರು ಮಾತನಾಡುತ್ತಾ, "ಸೇವೆ ಎನ್ನುವುದು ಪುಣ್ಯಕೆಲಸದ ಮಾರ್ಗ. ದುಡ್ಡು ಇದ್ದವನು ದೊಡ್ಡವ ಅಲ್ಲ, ಗುಣದಿಂದ ದೊಡ್ಡವನೆನೆಸಿಕೊಳ್ಳಬೇಕು. ಭಗವಂತ ಕೊಟ್ಟ ಸಂಪತ್ತನ್ನು ಹಂಚಿಕೊಳ್ಳುವುದು ಮಾನವ ಧರ್ಮ" ಎಂದು ಹೇಳಿದರು.
ಹೊಸ ಬೆಳಕು ಸೇವಾ ಟ್ರಸ್ಟ್ ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು, ತನ್ನ ನಿಷ್ಠಾವಂತ ಸೇವೆಗಳಿಂದ ಸಮಾಜದಲ್ಲಿ ಭರವಸೆಯ ಬೆಳಕು ಹರಡುತ್ತಿದೆ.