ಹಿಂದೂ ಯುವ ಮುಖಂಡ ಅಜಿತ್ ರೈ ಹೊಸಮನೆಗೆ ಗಡಿಪಾರು ಆದೇಶ! ಹಿಂದೂ ಜಾಗರಣ ವೇದಿಕೆಯು ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಪ್ರತಿರೋಧ!

  • 05 Jun 2025 12:54:28 PM


ಪುತ್ತೂರು: ಹಿಂದೂ ಜಾಗರಣ ವೇದಿಕೆಯು ತನ್ನ ಬದ್ಧತೆಯೊಂದಿಗೆ ಹಿಂದೂ ಸಮಾಜದ ಹಿತಕ್ಕಾಗಿ ನಿರಂತರ ದುಡಿಯುತ್ತಿರುವ ಕಾರ್ಯಕರ್ತರ ಮತ್ತು ನಾಯಕರ ಮೇಲೆ ಕಾಂಗ್ರೆಸ್ ಸರ್ಕಾರವು ದಬ್ಬಾಳಿಕೆ ನಡೆಸುತ್ತಿದೆ.

 

 ಸಮಾಜಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುವ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಪೊಲೀಸರು ಹಿಂದೂ ಯುವ ಮುಖಂಡ ಅಜಿತ್ ರೈ ಹೊಸಮನೆ ಅವರನ್ನು ಗಡಿಪಾರು ಮಾಡುವ ಆದೇಶ ಹೊರಡಿಸಿದೆ. ಈ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. 

 

ಇದೊಂದು ರಾಜಕೀಯ ಪ್ರೇರಿತ ದಬ್ಬಾಳಿಕೆ. ಅಜಿತ್ ರೈ ಹೊಸಮನೆ ಅವರೊಂದಿಗೆ ಪೂರ್ಣ ಹಿಂದೂ ಸಮಾಜ ನಿಂತಿದೆ. ಈ ದಬ್ಬಾಳಿಕೆಗೆ ನಾವು ಬಗ್ಗಲ್ಲ," ಎಂಬ ಉಗ್ರ ಪ್ರತಿಕ್ರಿಯೆಎನ್ನು ಹಿಂದೂ ಜಾಗರಣ ವೇದಿಕೆ ನೀಡಿದೆ.

 

ಇದು ಹಿಂದೂ ಧ್ವನಿಯನ್ನು ಮೌನಗೊಳಿಸಲು ನಡೆಸುವ ಹುನ್ನಾರದ ಪ್ರಯತ್ನವಾಗಿದೆ. ಈ ಪರಿಸ್ಥಿತಿಯಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಮತ್ತು ಜನತೆ ಏಕತೆಯಿಂದ ಮುಂದೆ ಬಂದು ನ್ಯಾಯಕ್ಕಾಗಿ ಹೋರಾಡಬೇಕು ಎಂದು ತಿಳಿಸಿದೆ.