ಸುಳ್ಯ:ನಿಯಮ ಕೇವಲ ಕೆಲವರಿಗೆ ಮಾತ್ರ ಸೀಮಿತವೇ?? ಸುಳ್ಯದಲ್ಲಿ ನಾಲ್ವರು ಯುವಕರ ಬೈಕ್ ಸವಾರಿ, ಪೊಲೀಸರು ಮೌನವೇಕೆ?

  • 05 Jun 2025 06:36:14 PM


ಸುಳ್ಯ : ಸುಳ್ಯ ತಾಲೂಕು ಗಾಂಧಿನಗರದಲ್ಲಿ ತಡರಾತ್ರಿ ವೇಳೆಯಲ್ಲಿ ನಾಲ್ವರು ಅನ್ಯಮತೀಯ ಯುವಕರು ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ರಹಿತ ಮೊಬೈಲ್ ನೋಡಿಕೊಂಡು ಸವಾರಿ ಮಾಡುತ್ತಿರುವ ದೃಶ್ಯವೊಂದು ಕಂಡು ಬಂದಿದೆ.

 

 

ನಿಯಮದ ಪ್ರಕಾರ ಬೈಕ್‌ನಲ್ಲಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ನಾಲ್ವರು ಸವಾರಿ ಮಾಡುವುದು ನಿಯಮ ಉಲ್ಲಂಘನೆಯಾಗಿರುತ್ತದೆ.

 

ಆದರೂ ಕೂಡ ಈ ದೃಶ್ಯಕ್ಕೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

 

 

ಇದಲ್ಲದೆ, ಇಲ್ಲಿ ನಿರಂತರವಾಗಿ ಗುಂಪುಗೂಡುವುದು ಹೆಲ್ಮೆಟ್ ರಹಿತ ಬೈಕ್ ಸವಾರಿ,ಇತ್ಯಾದಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂಬ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.

 

ಅದೇ ರೀತಿ “ಇದೇ ಕೃತ್ಯವನ್ನು ಹಿಂದೂ ಕಾರ್ಯಕರ್ತರು ಮಾಡಿದ್ದರೆ, ಅವರ ಮೇಲೆ ಕ್ರಮ ತೆಗೆದುಕೊಂಡು ಮನೆಗೂ ಭೇಟಿ ನೀಡುತ್ತಿದ್ದರು. ಆದರೆ ಇತರರಿಗೆ ಈ ನಿಯಮ ಅನ್ವಯಿಸದಂತೆ ವರ್ತಿಸುತ್ತಿರುವುದು ಎಲ್ಲಿಯ ನ್ಯಾಯ?” ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ.

 

ಇತ್ತೀಚೆಗೆ ಪೊಲೀಸರ ದಾಳಿ ಹಿಂದೂ ಕಾರ್ಯಕರ್ತರ ಮನೆಗಳತ್ತ ಮಾತ್ರ ಸೀಮಿತವಾಗಿರುವುದನ್ನು ಕೂಡ ಉಲ್ಲೇಖಿಸಿದ್ದು, ಪೊಲೀಸರು ನಿರಪಕ್ಷವಾಗಿ ಕಾನೂನನ್ನು ಕಾಪಾಡಬೇಕೆಂದು ಕಾರ್ಯಕರ್ತರು ಬೇಡಿಕೆಎನ್ನುಟ್ಟಿದ್ದಾರೆ.