ಪುತ್ತಿಗೆ: ಪುತ್ತಿಗೆ ಗ್ರಾಮ ಪಂಚಾಯತಿಗೊಳಪಟ್ಟ ಸಂಟನಡ್ಕ ಪ್ರದೇಶದಲ್ಲಿ ಸಂಭವಿಸಿದ ವ್ಯಾಪಕ ಗುಡ್ಡ ಕುಸಿತದಿಂದ ಸ್ಥಳೀಯ ಕೃಷಿಕರಿಗೆ ಭಾರಿ ನಷ್ಟ ಸಂಭವಿಸಿದೆ.
ಕಳೆದ ಕೆಲವು ದಿನಗಳಿಂದ ಹ
ಸುರಿಯುವ ಮಳೆಗೆ ಗುಡ್ಡ ಕುಸಿಯುವ ಪ್ರಮಾಣ ಹೆಚ್ಚಾಗಿದ್ದು, ಕಲ್ಲಡ್ಕ ಸುಬ್ಬ ನಾಯ್ಕ ಮತ್ತು ರಸಾಕ್ ಅವರಿಗೆ ಸೇರಿದ ತೋಟಗಳಿಗೆ ತೀವ್ರ ಹಾನಿಉಂಟಾಗಿದೆ.
ಬೃಹತ್ ಗಾತ್ರದ ಕಲ್ಲುಗಳು ಮಣ್ಣು ಸಹಿತ ಕುಸಿದ ಪರಿಣಾಮವಾಗಿ ಗುಡ್ಡದ ಕೆಳಭಾಗದಲ್ಲಿರುವ ತೋಟಗಳು ಸಂಪೂರ್ಣವಾಗಿ ನಾಶವಾಗಿದೆ. ಸುಮಾರು 30 ಸೆಂಟ್ಸ್ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮತ್ತು ತೆಂಗಿನ ಮರಗಳು ನೆಲಸಮವಾಗಿದೆ.
ಸ್ಥಳದಲ್ಲಿ ಹಾನಿ ನಿರೀಕ್ಷೆಗಿಂತ ಹೆಚ್ಚು ಇರುವ ಸಾಧ್ಯತೆ ಇರುವುದರಿಂದ ಸಂಬಂಧಿತ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವಲೋಕನೆ ನಡೆಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಮನವಿ ಮಾಡಿದ್ದಾರೆ.