ಸುಳ್ಯ: ಬಕ್ರೀದ್ ಸಂದರ್ಭದಲ್ಲಿ ಜಾನುವಾರು ಹತ್ಯೆ ತಡೆಯಲು ಕ್ರಮ ಕೈಗೊಳ್ಳಿ: ವಿ ಎಚ್ ಪಿ ಸುಳ್ಯ ಪ್ರಖಂಡದಿಂದ ಪ್ರಬಲ ಮನವಿ!

  • 05 Jun 2025 09:38:17 PM


ಸುಳ್ಯ: ಬಕ್ರೀದ್ ಹಾಗೂ ಇತರ ಹಬ್ಬಗಳ ಸಂದರ್ಭದಲ್ಲಿ ಜಾನುವಾರುಗಳ ಅಕ್ರಮ ಸಾಗಾಟ, ಶೇಖರಣೆ ಮತ್ತು ಹತ್ಯೆಯನ್ನು ತಡೆಯುವುದಕ್ಕಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಕಾರ್ಯಕರ್ತರು ಸುಳ್ಯ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

 

ಸುಪ್ರೀಂ ಕೋರ್ಟ್‌ನ WP(C) 309/2003 ಹಾಗೂ WP 1443/2008 ತೀರ್ಪುಗಳು, Animal Welfare Board of India ನಿರ್ದೇಶನಗಳು ಮತ್ತು ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ಪ್ರಕಾರ ಜಾನುವಾರು ಹತ್ಯೆ ನಿಷಿದ್ಧವಾಗಿದೆ. 

 

ಈ ಹಿನ್ನಲೆಯಲ್ಲಿ ಸಾರ್ವಜನಿಕ ಜಾಗಗಳಲ್ಲಿ ಕಿವಿಯೋಲೆ ಇಲ್ಲದ ಜಾನುವಾರುಗಳ ಸಾಗಾಟ, ಶೇಖರಣೆ ಮತ್ತು ಹತ್ಯೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

 

ಈ ಸಂದರ್ಭದಲ್ಲಿ ಸೋಮಶೇಖರ್ ಪೈಕ, ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ, ಭಾನುಪ್ರಕಾಶ್ ಪೆರುಮುಂಡ, ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ಅಭಿಜಿತ್ ಸುಳ್ಯ, ಕಿರಣ್ ಸುಳ್ಯ, ನಿರ್ದೇಶ್ ಸುಳ್ಳಿ, ನಿಕೇಶ್ ಹಾಗೂ ಪ್ರಿತೇಶ್ ನಾರ್ಣಾಕಜೆ ಅವರುಗಳು ಉಪಸ್ಥಿತರಿದ್ದರು.

 

ಇವರು ಎಲ್ಲರೂ ಜಾನುವಾರುಗಳ ಹಕ್ಕು ರಕ್ಷಣೆಗೆ ಬದ್ಧರಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅಕ್ರಮಗಳನ್ನು ತಡೆಗಟ್ಟಲು ಸರ್ಕಾರಕ್ಕೆ ಸಹಕಾರ ನೀಡಲು ಸದಾ ಸಿದ್ಧವಿರುವುದಾಗಿ ತಿಳಿಸಿದ್ದಾರೆ.