ಬದಿಯಡ್ಕ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿಯಲ್ಲಿ ₹2 ಲಕ್ಷ ಧನಸಹಾಯ ಹಸ್ತಾಂತರ!

  • 07 Jun 2025 01:38:47 PM


ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಮಾನವೀಯ ಸಹಾಯ ಯೋಜನೆಯಡಿಯಲ್ಲಿ, ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ ಬಾಬು ಪಾಠಾಳಿ ಅವರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದ ₹2,00,000/- ಮೊತ್ತದ ಧನಸಹಾಯವನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಖಂಡಿಗೆ ಅವರು ಜೂನ್ 5 ರಂದು ಹಸ್ತಾಂತರಿಸಿದರು.

 

ಈ ಧನಸಹಾಯವನ್ನು ಫಲಾನುಭವಿಯ ಮನೆಯಲ್ಲಿ ಹಸ್ತಾಂತರಿಸಲಾಯಿತು. ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಚಂದ್ರ ಎಂ ಮತ್ತು ಶಾಖಾ ವ್ಯವಸ್ಥಾಪಕರಾದ ಶ್ರೀ ಶ್ಯಾಂ ಪ್ರಶಾಂತ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಸಮುದಾಯದ ಸದಸ್ಯರ ಸಂಕಷ್ಟದ ಹೊಣೆ ಹೊತ್ತು ಸಹಾಯದ ಹಸ್ತ ಚಾಚುತ್ತಿರುವ ಕ್ಯಾಂಪ್ಕೋ ಸಂಸ್ಥೆಯ ಈ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು ಹಾಗೆಯೇ ಇತರ ಸಂಸ್ಥೆಗಳಿಗೂ ಇದು ಪ್ರೇರಣೆಯಾಗಿದೆ.