ಕಾರ್ಕಳ: ಪ್ರಾಮಾಣಿಕ ಚಾಲಕರಿಂದ ಕಳೆದುಹೋದ ಮೊಬೈಲ್‌ ಅದರ ವಾರಸಿದಾರಿಗೆ ಸುರಕ್ಷಿತವಾಗಿ ವಾಪಸು!

  • 07 Jun 2025 02:21:05 PM


ಕಾರ್ಕಳ,ಅಲಂಗಾರು: ಕಾರ್ಕಳದಿಂದ ಅಲಂಗಾರುಗೆ ಪ್ರಯಾಣಿಸುತ್ತಿದ್ದ ಸಹೋದರಿಯೊಬ್ಬರು ಪ್ರಯಾಣದ ವೇಳೆ ಮೊಬೈಲ್ ಫೋನ್ ಅನ್ನು ಕಳೆದು ಕೊಂಡಿದ್ದರು. 

 

ಆದರೆ ಅದನ್ನು ಮರುದಿನ ಬೆಳಿಗ್ಗೆ ಮೂಡಬಿದ್ರಿ ಬಸ್ ನಿಲ್ದಾಣದಲ್ಲಿ ಬಸ್‌ ಚಾಲಕರು ಮತ್ತು ನಿರ್ವಾಹಕರು ಸಿಕ್ಕವರಂತೆ ಪರಿಗಣಿಸದೇ ನಷ್ಟಪಟ್ಟು ಹೋದವರಿಗೆ ಮರಳಿ ಹಸ್ತಾಂತರಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

 

ಅವರ ಹೆಸರು ತಿಳಿದು ಬಂದಿಲ್ಲ ಆದರೆ ಅವರ ಈ ಪ್ರಾಮಾಣಿಕ ನಡೆ ಸಾರ್ವಜನಿಕರಿಂದ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಅವರು ತೋರಿದ ಈ ನಿಷ್ಠೆ ಮತ್ತು ಜವಾಬ್ದಾರಿತನವು ಇಂದಿನ ಸಮಾಜದಲ್ಲಿ ಕನ ಸಿಗುವುದಿಲ್ಲ.

 

ಅವರ ಪ್ರಾಮಾಣಿಕತೆಗೆ ತುಂಬು ಹೃದಯದ ಧನ್ಯವಾದಗಳು. ದೇವರು ಅವರ ಜೀವನವನ್ನು ಆಶೀರ್ವದಿಸಲಿ.!