ಬೆಂಗಳೂರು: ಚಿನ್ನಸ್ವಾಮಿ ದಟ್ಟಣೆ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು, ನ್ಯಾಯಕ್ಕಾಗಿ ಸಾಮಾಜಿಕ ಬೆಂಬಲ!

  • 07 Jun 2025 03:27:13 PM


ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ಘಟನೆ ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. 

 

ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಚ್ಚುವರಿ ಕಮಿಷನರ್ ವಿಕಾಶ್ ಕುಮಾರ್ ಮತ್ತು ಡಿಸಿಪಿ ಎಚ್.ಟಿ. ಶೇಖರ್ ಅವರನ್ನು ಕಾಂಗ್ರೇಸ್ ಸರ್ಕಾರ ಅಮಾನತು ಮಾಡಿದೆ.

 

 ಈ ಕ್ರಮವು ಸಾರ್ವಜನಿಕರು,ಹಿಂದೂ ಕಾರ್ಯಕರುಗಳು ಹಾಗೂ ಇನ್ನೂ ಹಲವಾರು ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿವೆ.

 

ಪೊಲೀಸ್ ಅಧಿಕಾರಿಗಳಿಗೆ ತಕ್ಷಣದ ಅಮಾನತು ನೀಡಿದ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. #IStandWithBDayanand ಮತ್ತು #IStandWithPolice ಹ್ಯಾಶ್‌ಟ್ಯಾಗ್‌ಗಳ ಮೂಲಕ ಜನರು ನಿಷ್ಠಾವಂತ ಅಧಿಕಾರಿಗಳ ಪರವಾಗಿ ತಮ್ಮ ಬೆಂಬಲವನ್ನು ತೋರಿಸುತ್ತಿದ್ದಾರೆ. 

 

ನಿವೃತ್ತ ಐಪಿಎಸ್ ಅಧಿಕಾರಿಗಳು ಕೂಡಾ ಈ ಸಸ್ಪೆನ್ಷನ್ ನಾಯಯುತವಲ್ಲ ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.

 

ಇತ್ತ ಘಟನೆಯ ತನಿಖೆ ಆರಂಭವಾಗಿದ್ದು, ಆರ್ಸಿಬಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ವಿರೋಧ ಪಕ್ಷಗಳು ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಮೇಲ್ನೋಟದ ನಾಯಕರ ರಾಜೀನಾಮೆಗೆ ಆಗ್ರಹಿಸುತ್ತಿದ್ದು, ಈ ದುರಂತ ಸರಳ ನಿರ್ವಹಣಾ ತಪ್ಪಲ್ಲ, ರಾಜಕೀಯ ನಿರ್ಲಕ್ಷ್ಯದ ಪ್ರತಿಫಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.