ಮಂಜೇಶ್ವರ- ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣ್ಯ ಭಟ್ ರಾಜೀನಾಮೆ: ಜಿಲ್ಲಾಧ್ಯಕ್ಷರು ಸಮಸ್ಯೆಗೆ ಪರಿಹಾರವನ್ನು ಮಾಡಬೇಕು ,ಹೊರತು ಸಮಸ್ಯೆಯ ಭಾಗವಾಗ ಬಾರದು ಎಂದು ತೀವ್ರ ಆರೋಪ!

  • 08 Jun 2025 03:43:02 PM


ಮಂಜೇಶ್ವರ: ಮಂಜೇಶ್ವರ ಬಿಜೆಪಿ ಮಂಡಲದ ಸಕ್ರಿಯ ಸದಸ್ಯರಾಗಿರುವ ಹಾಗೂ ಹಿರಿಯ ಕಾರ್ಯಕರ್ತರಾದ ಸುಬ್ರಹ್ಮಣ್ಯ ಭಟ್ ಎನ್ (ಕೀರ್ತಿ ಭಟ್) ಅವರು ತಮ್ಮ ಪಕ್ಷದ ಜವಾಬ್ದಾರಿಯಿಂದ ರಾಜೀನಾಮೆ ಘೋಷಿಸಿದ್ದಾರೆ.

 

 ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ಜಿಲ್ಲಾ ನಾಯಕತ್ವದ ನಡೆಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

 

ಕಾರ್ಯಕರ್ತನನ್ನು ಉಚ್ಛಾಟಿಸಿರುವ ಜಿಲ್ಲಾ ಅಧ್ಯಕ್ಷೆಯ ಕ್ರಮವು ಸಮರ್ಥನೀಯವಾದುದಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

 

 ಯಾವುದೇ ವೈಯಕ್ತಿಕ ಲಾಲಸದಿಲ್ಲದೆ ಪಕ್ಷದ ತತ್ವಗಳಿಗೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತನನ್ನು ಪಕ್ಷದಿಂದ ಉಚ್ಚಾಟಿಸುವ ನಡೆ ಪಕ್ಷದ ಮೌಲ್ಯಗಳನ್ನೇ ಲಂಘಿಸುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

 

ಭಾರತೀಯ ಜನತಾಪಕ್ಷವು 'Party with a Difference' ಎಂದು ಗುರುತಿಸಿಕೊಂಡಿರುವಾಗ ಇದು ನಾಯಕತ್ವ ಕೇಂದ್ರಿತ ಆಗದೆ ಕಾರ್ಯಕರ್ತನಿಗೆ ಆದ್ಯತೆ ನೀಡುವ ಪಕ್ಷವಾಗಬೇಕು ಎಂಬ ಮನೋಭಾವವನ್ನು ಅವರು ತಿಳಿಸಿದ್ದಾರೆ. 

 

ಜಿಲ್ಲಾ ನಾಯಕತ್ವದ ಸರ್ವಾಧಿಕಾರದ ಪ್ರವೃತ್ತಿ ತಾಳಲಾಗದ ಮಟ್ಟಿಗೆ ಬೆಳೆದಿದೆ ಎಂಬುದಾಗಿ ಅವರು ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

 

ತ್ರಿಸ್ತರ ಪಂಚಾಯತ್ ಚುನಾವಣೆಯ ಹೊಸ್ತಿಲಲ್ಲಿರುವಾಗ ಕಾರ್ಯಕರ್ತರ ನಿರ್ಲಕ್ಷ್ಯ ಹಾಗೂ ಸಂವಾದದ ಕೊರತೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪಕ್ಷದ ತತ್ವಗಳಿಗೆ ಬದ್ಧನಾಗಿ ಇರುತ್ತೇನೆ ಆದರೆ ಈಗಿನಿಂದ ಸಾಮಾನ್ಯ ಕಾರ್ಯಕರ್ತನಾಗಿ ಉಳಿಯಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

 

ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣ್ಯ ಭಟ್ ರಾಜೀನಾಮೆ: ಜಿಲ್ಲಾಧ್ಯಕ್ಷರು ಸಮಸ್ಯೆಗೆ ಪರಿಹಾರವನ್ನು ಮಾಡಬೇಕು ,ಹೊರತು ಸಮಸ್ಯೆಯ ಭಾಗವಾಗ ಬಾರದು ಎಂದು ತೀವ್ರ ಆರೋಪ!