ಕಾರ್ಕಳ: ಹುಟ್ಟುಹಬ್ಬದ ಸಂಭ್ರಮವು ದುಃಖದಲ್ಲಿ ಪರಿವರ್ತನೆಯಾದ ದಾರುಣ ಘಟನೆಯೊಂದು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ಜೂನ್ 7 ರಂದು ಸಂಭವಿಸಿದೆ.
ಪರಪುವಿನ ನಿವಾಸಿ ಮತ್ತು ಆಟೋ ಚಾಲಕರಾಗಿದ್ದ ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಅಪಘಾತದಲ್ಲಿ ಬಲಿಯಾಗಿ ತನ್ನ ಹುಟ್ಟು ಹಬ್ಬದಂದೇ ಕೊನೆಯುಸಿರೆಳೆದಿದ್ದಾರೆ.
ತನ್ನ ಹುಟ್ಟುಹಬ್ಬಕ್ಕೇ ಮಗುಗಾಗಿ ಐಸ್ ಕ್ರೀಂ ತರಲು ಶನಿವಾರ ರಾತ್ರಿ ಸ್ಕೂಟಿಯಲ್ಲಿ ಪೇಟೆಗೆ ತೆರಳಿದ್ದ ಸುಬ್ರಹ್ಮಣ್ಯ ಅವರು, ರಾತ್ರಿ ಸಮಯದಲ್ಲಿ ಮನೆಗೆ ಮರಳುತ್ತಿದ್ದಾಗ ಪರಪು ಸೇತುವೆ ಬಳಿ ನಿಯಂತ್ರಣ ತಪ್ಪಿ ಸ್ಕೂಟಿಯೊಂದಿಗೆ ಹೊಳೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ರಾತ್ರಿಯಿಡೀ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಅವರಿಗಾಗಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ.
ಅಚ್ಚರಿ ಮೂಡಿಸುವಂತೆ, ಶೋಧ ಕಾರ್ಯಚರಣೆಯ ವೇಳೆ ಸೇತುವೆಯ ಕೆಳಭಾಗದಲ್ಲಿ ಸ್ಕೂಟಿಯೊಂದಿಗೆ ಅವರ ಮೃತದೇಹ ಪತ್ತೆಯಾಯಿತು ಎನ್ನಲಾಗಿದೆ.
ಈ ದುರಂತದಿಂದ ಕುಟುಂಬದಲ್ಲಿ ತೀವ್ರ ಆಘಾತವನ್ನು ಉಂಟುಮಾಡಿದ್ದು, ಸುಬ್ರಹ್ಮಣ್ಯ ಅವರು ತಂದೆ, ತಾಯಿ, ಸಹೋದರಿ, ಪತ್ನಿ ಹಾಗೂ ಪುಟ್ಟ ಮಗಳನ್ನು ಅಗಲಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.