ಮೈಸೂರು: ಮೋದಿ ಸರ್ಕಾರಕ್ಕೆ ಹತ್ತರಲ್ಲಿ ಶೂನ್ಯ ಅಂಕ; ಸಿಎಂ ಸಿದ್ದರಾಮಯ್ಯ !

  • 09 Jun 2025 03:14:59 PM


ಮೈಸೂರು: ಪುನಃ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈವರೆಗೆ ಯಾವುದೇ ರೀತಿಯ ತಾತ್ವಿಕ ಸಾಧನೆಗಳಿಲ್ಲ ಎಂಬುದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

 

 ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮೋದಿ ಸರ್ಕಾರವು ಹತ್ತರಲ್ಲಿ ಶೂನ್ಯ ಅಂಕಕ್ಕಷ್ಟೇ ಅರ್ಹ” ಎಂದು ತೀವ್ರ ಟೀಕೆ ಮಾಡಿದ್ದಾರೆ.

 

“ನೋಟು ಅಮಾನ್ಯೀಕರಣ, ಗ್ಯಾಸು ಬೆಲೆ, ಉದ್ಯೋಗ ಭರವಸೆಇವೆಲ್ಲವೂ ಜನರನ್ನು ಮೋಸಗೊಳಿಸಿದ ಮಾತುಗಳು ಎಂದೂ ‘ಅಚ್ಚೇ ದಿನ್ ಆಯೆಗಾ ಎಂದಿದ್ದರು ಅದು ಬಂತಾ?? ಎಂಬುದಾಗಿ ಪ್ರಶ್ನಿಸಿದ್ದಾರೆ??.. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು, ಏನು ಕೊಟ್ಟಿದ್ದಾರೆ? ಎಂದೆಲ್ಲ ವಾಗ್ದಾಳಿ ನಡೆಸಿದ್ದಾರೆ.

 

 

ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮೊದಲು ಟೀಕಿಸಿದ್ದ ಮೋದಿಯವರ ಪಕ್ಷ, ಈಗ ಅದನ್ನೇ ನಕಲು ಮಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

 

 ರಾಜ್ಯಗಳು ದಿವಾಳಿಯಾಗುತ್ತವೆ ಎಂಡಿ ಹೇಳಿದವರು ಈಗ ಆ ಯೋಜನೆಗಳನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ತಂದಿದ್ದಾರೆ. ಇದರಿಂದ ಕೇಂದ್ರದ ನಿಜವಾದ ನೀತಿಯು ಬಯಲಾಗುತ್ತದೆ" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.