ಉಡುಪಿ: ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಸರ್ಕಾರಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿರುವ ಆರೋಪದ ಮೇರೆಗೆ ಹಿರಿಯಡ್ಕ ಪೊಲೀಸರು ದಾಳಿ ನಡೆಸಿ ಸುಮಾರು 1,27,880 ರೂ. ಮೌಲ್ಯದ 55 ಕ್ವಿಂಟಾಲ್ 60 ಕೆ.ಜಿ. ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬೊಮ್ಮರಬೆಟ್ಟು ನಿವಾಸಿ ವಾಸುದೇವ ಪ್ರಭು (56) ಅವರನ್ನು ಅರೆಸ್ಟ್ ಮಾಡಲಾಗಿದೆ..
ಆರೋಪಿಯು ಮಾಂಬೆಟ್ಟು ಎಂಬಲ್ಲಿ ತನ್ನ ಜನರಲ್ ಸ್ಟೋರ್ನಲ್ಲಿ ಸಾರ್ವಜನಿಕರಿಂದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಸಂಗ್ರಹಿಸಿದ್ದಾನೆ ಎಂಬ ಖಚಿತ ಮಾಹಿತಿಯಯೊಂದಿಗೆ ಉಡುಪಿಯ ಆಹಾರ ನಿರೀಕ್ಷಕರ ಸಹಕಾರದೊಂದಿಗೆ ಹಿರಿಯಡ್ಕ ಠಾಣೆಯ ಪಿಎಸ್ಐ ಪುನಿತ್ ಕುಮಾರ್ ಬಿ.ಇ., ಸಿಬ್ಬಂದಿಗಳಾದ ಆದರ್ಶ ಮತ್ತು ಕಾರ್ತಿಕ್ ಜತೆಗೂಡಿ ಅಂಗಡಿಗೆ ದಾಳಿ ನಡೆಸಿದರು.
ದಾಳಿ ವೇಳೆಯಲ್ಲಿ ಅಂಗಡಿಯ ಸಿಟೌಟ್ ಪ್ರದೇಶದಲ್ಲಿ 131 ಪ್ಲಾಸ್ಟಿಕ್ ಚೀಲಗಳಲ್ಲಿ ದಾಸ್ತಾನು ಇಡಲಾಗಿದ್ದ ಅನ್ನಭಾಗ್ಯ ಅಕ್ಕಿಯನ್ನು ಪತ್ತೆಹಚ್ಚಲಾಯಾಯಿತು.
ವಶಪಡಿಸಿಕೊಂಡ ಅಕ್ಕಿಯ ಮೌಲ್ಯವನ್ನು ಪ್ರಸ್ತುತ ರೂ. 1,27,880 ಎಂದು ಅಂದಾಜಿಸಲಾಗಿದೆ.
ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣವನ್ನು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.