ಕೆಂಪು ಕಲ್ಲು ಸಾಗಾಟ ಮತ್ತು ಮರಳು ಸಾಗಾಟಕ್ಕೆ ಕಠಿಣ ಕಾನೂನು ಯಾಕೆ? ಸರ್ಕಾರದ ಕಟ್ಟುನಿಟ್ಟಿನ ರೂಲ್ಸ್ ವಿರುದ್ಧ ಧ್ವನಿ ಎತ್ತಿದ ಧನ್ಯಕುಮಾರ್ ಬೆಳಂದೂರು!

  • 13 Jun 2025 07:32:38 PM


ಬೆಳಂದೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮನೆ ಕಟ್ಟುವ ಅವಶ್ಯಕತೆಗಾಗಿ ಬಳಸಲಾಗುವ ಕೆಂಪು ಕಲ್ಲು ಪಾಯ ಮತ್ತು ಸಾಗಾಟದ ಮೇಲೆ ಸರ್ಕಾರ ಹೊರಹೊಮ್ಮಿಸಿರುವ ಕಠಿಣ ನಿಯಮಗಳಿಂದಾಗಿ ಸಾವಿರಾರು ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಧನ್ಯಕುಮಾರ್ ಬೆಳಂದೂರು ಅವರು ಈ ಕುರಿತು ಭಾರೀ ಅಕ್ರೋಶ ವ್ಯಕ್ತಪಡಿಸಿರುವ ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

 

 ಕಲ್ಲು ಮತ್ತು ಹೊಯಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ನೆರೆಯ ಜಿಲ್ಲೆಗಳಿಗೆ ಪ್ರತಿಯೊಬ್ಬರೀಗೂ ಅತೀ ಮುಖ್ಯವಾಗಿ ಬೇಕಾಗಿರುವಂತಹುದು ಆದರೆ ಇದರ ಬಗ್ಗೆ ಯಾವ ಪಕ್ಷದ ಪ್ರತಿನಿಧಿಗಳು ಯಾಕೆ ದ್ವನಿ ಎತ್ತುತ್ತಿಲ್ಲ.....?

ಕಾರಣವಾದರು ಏನಿರ ಬಹುದು...?

 

ಕೆಂಪು ಕಲ್ಲು ಅಂದ್ರೆ ಜಂಬು ಇಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತೀ ರಾಜಕಾರಣಿಗಳ ಮನೆಗೆ ಸರ್ಕಾರಿ ಕಟ್ಟಡಗಳಿಗೆ, ದೇವಸ್ಥಾನ, ಚರ್ಚ್, ಮಸೀದಿಗೆ ಹಾಗೂ ಸಾರ್ವಜನಿಕ ಬಡ ಕುಟುಂಬದವರಿಗೂ ಒಂದು ಮನೆ ನಿರ್ಮಿಸಲು ಬೇಕಾಗಿರುವ ಅಗತ್ಯ ವಸ್ತು ಆದರೆ ಇದಕ್ಕೆ ಯಾಕೆ ಇಷ್ಟು ಕಠಿಣ ಕಾನೂನು ರೂಲ್ಸ್.....?

 

ಕೆಂಪು ಕಲ್ಲಿನ ಹಿಂದೆ ಅದೆಷ್ಟು ಬಡ ಕುಟುಂಬದ ಪರಿಶ್ರಮ ಇದೆಯೇಂದು ರಾಜಕೀಯ ಜನಪ್ರತಿನಿಧಿಗಳು ಅಧಿಕಾರಿಗಳು ಆಲೋಚನೆ ಮಾಡಿದ್ದಿರ....ಇಲ್ಲ ಯಾಕೆ....? ಎಂಬುದಾಗಿ ಧನ್ಯಕುಮಾರ್ ಅವರು ಪತ್ರದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಸರ್ಕಾರದ ಹೊಸ ಹೊಸ ನಿಯಮಗಳಿಂದ ಕೆಂಪು ಕಲ್ಲು ಪಾಯ ಪ್ರಾರಂಭಿಸುವುದು ಯುದ್ಧ ಸಮಾನವಾಗಿದೆ. ಅರ್ಧ ಜೀವ ಹೋದರೂ ಆದೇಶ, ಅನುಮತಿ, ರಾಯಲ್ಟಿ ಫೈನ್ ಎಂಬಾತ ಸಾಕಾಗಿ ಹೋಗಿದೆ. ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದಾದಾಗ ಕೊನೆಗೆ ಕೆಂಪು ಕಲ್ಲು ಮತ್ತು ಪಾಯ ಬಂದು ಮಾಡುವ ಅನಿವಾರ್ಯತೆ ಬಂದಿರುತ್ತದೆ ಈಗ ಅದೇ ಆಗಿರುತ್ತದೆ. ಕೆಂಪು ಕಲ್ಲು ಕೊರೆ ಬಂದ್! ಎಂದು ಅವರು ಪತ್ರದ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಪ್ರಕರಣದ ಪರಿಣಾಮವಾಗಿ ಸುಮಾರು 25,000 – 30,000 ಕಾರ್ಮಿಕರು, ಲಾರಿ ಚಾಲಕರು, ಲೋಡಿಂಗ್ ಹೆಲ್ಪರ್ ಗಳು, ಮೆಸ್ಟ್ರಿ, ಪೈಂಟರ್, ಸೆಂಟ್ರಿಂಗ್ ಕಾರ್ಮಿಕರು ಜೀವನ ನಡೆಸಲು ಅಸಾಧ್ಯವಾದ ಸ್ಥಿತಿಗೆ ತಲುಪಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

 

ಕೆಂಪು ಕಲ್ಲು ಸಾಗಾಟ ಮಾಡಬೇಕಾದರೆ, ಲಾರಿಯನ್ನು ಖರೀದಿ ಮಾಡಲು ಬ್ಯಾಂಕ್ ಸಾಲ ತೆಗೆದುಕೊಂಡವರು ಇಂದು ಸಾಲ ತೀರಿಸಲು ಅಲೆದಾಡುವ ಸ್ಥಿತಿಯಲ್ಲಿದ್ದಾರೆ. ಉದ್ದೇಶ ಸರಿಯಾಗಿದ್ದರೂ ಸರ್ಕಾರದ ಕಾನೂನುಗಳಿಂದಾಗಿ ಲಾರಿ ರಸ್ತೆಗೆ ಇಳಿಯದ ಪರಿಸ್ಥಿತಿ ಉಂಟಾಗಿದೆ. ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

 

 

ಸರ್ಕಾರದ ಅಧಿಕಾರಿಗಳಿಂದ ಹೊಸ ಕಾನೂನು ರೂಲ್ಸ್ ಗಳಿಂದಾಗಿ ಕೆಂಪು ಕಲ್ಲು ಪಾಯ ಮತ್ತು ಸಾಗಾಟದಲ್ಲಿ ಹಾಗೂ ಸರ್ಕಾರಿ ಕಟ್ಟಡ ಅಥವಾ ಯಾವುದೇ ಮನೆ ಕಟ್ಟಿ ಗೃಹ ಪ್ರವೇಶ, ಸರ್ಕಾರಿ ಕಟ್ಟಡ ಉದ್ಘಾಟನೆ ಆಗವವರೆಗೆ ದುಡಿಯುವ ಅದೆಷ್ಟೋ ಕಾರ್ಮಿಕರ ಕಣ್ಣು ನೀರಿನ ಶಾಪಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಜನಪ್ರತಿನಿಧಿಗಳು ಗುರಿಯಾಗದಿರಿ ಎಚ್ಚರಿಕೆ ಸಹ ನೀಡಿದ್ದಾರೆ 

 

 

ಪತ್ರದ ಕೊನೆಯಲ್ಲಿ ಅವರು ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಕೆಂಪು ಕಲ್ಲು ಮತ್ತು ಹೊಯಿಗೆಗಳ ಲೈಸೆನ್ಸ್ ಮತ್ತು ಅನುಮತಿಯ ಪ್ರಕ್ರಿಯೆಯನ್ನು ಸರಳಗೊಳಿಸಿ, ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಕೆಂಪು ಕಲ್ಲು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.