ಕಾರ್ಕಳ: ವಿವಾಹಿತ ಹಿಂದೂ ಮಹಿಳೆಯ ಜೊತೆ ಅನ್ಯಮತೀಯ ಜಿಹಾದಿ ಎರಡು ಮಕ್ಕಳ ತಂದೆ ಹಾಗೂ ವರುಣ್ ಬಸ್ ನ ಚಾಲಕನನ್ನು ಶೃಂಗೇರಿ ಭಜರಂಗದಳ ಕಾರ್ಯಕರ್ತರು ಮಠದ ಸುತ್ತಮುತ್ತ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯರ ದೂರಿನ ಮೇರೆಗೆ ಭಜರಂಗದಳದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿ ಅನುಮಾನಾಸ್ಪದವಾಗಿ ಶೃಂಗೇರಿ ಮಠದ ಬಳಿ ನಡೆದುಕೊಂಡಿದ್ದ ಜೋಡಿಯನ್ನು ತಡೆ ಹಿಡಿದು, ಶೃಂಗೇರಿ ಪೋಲೀಸರಿಗೆ ಮಾಹಿತಿ ನೀಡಿರುತ್ತಾರೆ.ಪೊಲೀಸರ ಮಧ್ಯ ಪ್ರವೇಶದಿಂದ ಇದೀಗ ಜೋಡಿ ಠಾಣೆ ಮೆಟ್ಟಿಲೇರಿದ್ದಾರೆ.
ಮಠದ ಸುತ್ತಮುತ್ತ ಇಂತಹ ಸಂಬಂಧಗಳೊಂದಿಗೆ ಪವಿತ್ರತೆಯ ವಿರೋಧವಾಗುವ ಘಟನೆ ನಡೆದಿರುವುದರಿಂದ, ಹಿಂದೂ ಸಂಘಟನೆಗಳು ಈ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಅನುಮಾನಾಸ್ಪದ ನಡವಳಿಕೆಯಿಂದ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಸೂಕ್ತ ತನಿಖೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ.