ಸುಳ್ಯ: ನಾಗಪಟ್ಟಣ ದೇವಸ್ಥಾನದ ಬಳಿ 09.06.2025 ರಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗೋಮಾತೆ, ಚಿಕಿತ್ಸೆ ಫಲಕಾರಿಯಾಗದೇ 17.06.2025 ರಂದು ಮೃತ ಪಟ್ಟಿರುತ್ತದೆ. ಅಪಘಾತದ ಪರಿಣಾಮವಾಗಿ ಬೆನ್ನುಮೂಳೆಗೆ ಗಂಭೀರ ಗಾಯ ಉಂಟಾಗಿತ್ತು.
ಗೋಮಾತೆಯ ದೇಹವನ್ನು ಸುಳ್ಯ ನಗರ ಪಂಚಾಯತ್ನ ದಪನ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಶ್ರದ್ಧಾಪೂರ್ವಕವಾಗಿ ದಪನ ಮಾಡಲಾಯಿತು.
ಈ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸುಳ್ಯ ಘಟಕದ ನವೀನ್ ಎಲಿಮಲೆ, ವರ್ಷಿತ್ ಚೊಕ್ಕಾಡಿ, ಹರ್ಷಿತ್, ನಿಕೇಶ್, ನೂತನ್ ಸೇರಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಗೋಮಾತೆಯ ಪವಿತ್ರತೆ ಮತ್ತು ರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಗೋಹತ್ಯೆ ಹಾಗೂ ನಿರ್ಲಕ್ಷ್ಯದಿಂದ ಆಗುವ ಅಪಾಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.