ಪುತ್ತೂರಿನ ರಾಧಾಕೃಷ್ಣ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುವ ಹರ್ಷಿತ್ ಜ್ಯುವೆಲ್ಲರಿ ಕಮರ್ಷಿಯಲ್ ಕಟ್ಟಡದಲ್ಲಿ ಇಂಡಸ್ಟ್ರಿಯಲ್ ಉದ್ದೇಶಕ್ಕೆ ಬಳಕೆ ಪುತ್ತೂರಿನ ನ್ಯಾಯವಾದಿ ಚಂದ್ರಹಾಸ ಈಶ್ವರಮಂಗಲ ಇವರಿಂದ ನಗರಸಭಾ ಪೌರಾಯುಕ್ತರಿಗೆ ದೂರು
ಪುತ್ತೂರು ನಗರ ಸಭಾ ವ್ಯಾಪ್ತಿಗೊಳಪಟ್ಟ ರಾಧಾಕೃಷ್ಣ ಬಿಲ್ಡಿಂಗ್ ಎಂಬ ಕಮರ್ಷಿಯಲ್ ಕಟ್ಟಡದಲ್ಲಿ ಹರ್ಷಿತ್ ಜ್ಯುವೆಲ್ಲರಿ ವಕ್ಸ್ ಇವರು ಕಮರ್ಷಿಯಲ್ ಕಟ್ಟಡದಲ್ಲಿ ಚಿನ್ನ ಉತ್ಪಾಧನಾ ಘಟಕ ಕೈಗಾರಿಕಾ ಉದ್ದೇಶಕ್ಕೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಹತ್ತಿರವಿರುವ ವಕೀಲರ ಕಛೇರಿಗಳಿಗೆ ಹಾಗೂ ಇತರರಿಗೆ ತೊಂದರೆಯಾಗುತ್ತಿದ್ದು ಪ್ರತಿನಿತ್ಯ ಈ ಕಟ್ಟಡದಲ್ಲಿ ಇಡೀ ಕಟ್ಟಡ ವೈಬ್ರೇಶನ್ ಆಗುವ ರೀತಿಯಲ್ಲಿ ಶಬ್ದ ಉಂಟಾಗುತ್ತಿದ್ದು ಇದರಿಂದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಕಛೇರಿಗಳಿಗೆ ತೊಂದರೆಯಾಗುತ್ತಿದೆ
ಆದ್ದರಿಂದ ಕಮರ್ಷಿಯಲ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಹರ್ಷಿತ್ ಜ್ಯುವೆಲ್ಲರಿ ವಕ್ಸ್ ಇವರನ್ನು ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರ ಮಾಡಿಸಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ವಿಚಾರವಾಗಿ ಅಭ್ಯುದಯ ಲಾ ಚೇಂಬರ್ ಪುತ್ತೂರು ಇಲ್ಲಿನ ವಕೀಲರಾದ ಚಂದ್ರಹಾಸ ಈಶ್ವರಮಂಗಲ ಇವರು ಪುತ್ತೂರು ನಗರಸಭೆಯ ಪೌರಾಯುಕ್ತರಿಗೆ ದೂರು ನೀಡಿದ್ದರು
ಈ ದೂರಿನ ಅನ್ವಯ ನಗರ ಸಭಾ ಆಯುಕ್ತರ ಆದೇಶದ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಪುತ್ತೂರು ನಗರ ಸಭೆಯ ಹೆಲ್ತ್ ಇನ್ಸ್ಪೆಕ್ಟರ್ ಕಮರ್ಷಿಯಲ್ ಕಟ್ಟಡದಲ್ಲಿ ಇಂಡಸ್ಟ್ರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವುದನ್ನು ದೃಢ ಪಡಿಸಿರುತ್ತಾರೆ ಹಾಗೂ ಕಮರ್ಶಿಯಲ್ ಕಟ್ಟಡದಲ್ಲಿ ಇಷ್ಟು ಡಿಸಿಬೆಲ್ ಶಬ್ದ ಬಳಕೆ ಮಾಡಿ ಕೆಲಸ ಮಾಡುವಂತಿಲ್ಲ ಎನ್ನುವ ಎಚ್ಚರಿಕೆಯನ್ನು ಹರ್ಷಿತ್ ಜ್ಯುವೆಲ್ಲರಿಯ ಮಾಲಕರಿಗೆ ನೀಡಿರುತ್ತಾರೆ ಹಾಗೂ ಸಂಭಂದ ಪಟ್ಟವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ
ಈ ಸಮಸ್ಯೆಯ ಕುರಿತು ನಗರಸಭೆಯ ಪೌರಾಯುಕ್ತರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ
ಈ ಕುರಿತು ಹಿಂದು ರಿಪಬ್ಲಿಕ್ ಟಿವಿ ಗೆ ಮಾಹಿತಿ ನೀಡಿದ ನ್ಯಾಯವಾದಿಗಳು ನಗರಸಭೆಯ ಪೌರಾಯುಕ್ತರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಯಾವುದೇ ಕ್ರಮ ಜಾರಿಯಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗುವುದಾಗಿ ಮಾಹಿತಿ ನೀಡಿದರು ಅದಲ್ಲದೆ ಅವರ ಕೆಲಸವನ್ನು ನಿಲ್ಲಿಸುವ ಉದ್ದೇಶ ನಮಗಿಲ್ಲ ಅವರು ಪುತ್ತೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ತಮ್ಮ ಕೆಲಸ ಮಾಡಲಿ ಕಮರ್ಶಿಯಲ್ ಕಟ್ಟಡದಲ್ಲಿ ಈ ಕೆಲಸ ಮಾಡಿ ಇತರರಿಗೆ ತೊಂದರೆ ಕೊಡುವುದು ಬೇಡ ಎಂದು ತಿಳಿಸಿದರು