ಪುತ್ತೂರಿನ ನ್ಯಾಯವಾದಿ ದೂರಿನ ಬಳಿಕ ಏಳು ದಿನಗಳಲ್ಲಿ ಕಮರ್ಷಿಯಲ್ ಕಟ್ಟಡದಲ್ಲಿ ಯಾವುದೇ ಉದ್ದಿಮೆ ಪರವಾನಿಗೆ ಪಡೆಯದೆ ನಡೆಸುವ ಇಂಡಸ್ಟ್ರಿ ವರ್ಕ್ ನಿಲ್ಲಿಸುವಂತೆ ಹರ್ಷಿತ್ ಜ್ಯುವೆಲ್ಲರಿ ವರ್ಕ್ಸ್ ನ ಮಾಲಕರಾದ ಗಂಗಾಧರ ಆಚಾರ್ಯ ಇವರಿಗೆ ನೋಟೀಸು
ಪುತ್ತೂರಿನ ರಾಧಾಕೃಷ್ಣ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುವ ಹರ್ಷಿತ್ ಜ್ಯುವೆಲ್ಲರಿ ಕಮರ್ಷಿಯಲ್ ಕಟ್ಟಡದಲ್ಲಿ ಇಂಡಸ್ಟ್ರಿಯಲ್ ಉದ್ದೇಶಕ್ಕೆ ಬಳಕೆ ಪುತ್ತೂರಿನ ನ್ಯಾಯವಾದಿ ಚಂದ್ರಹಾಸ ಈಶ್ವರಮಂಗಲ ಇವರು ನಗರಸಭಾ ಪೌರಾಯುಕ್ತರಿಗೆ ದೂರು ನೀಡಿದ್ದರು
ಈ ದೂರಿನ ಅನ್ವಯ ನಗರ ಸಭಾ ಆಯುಕ್ತರ ಆದೇಶದ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಹಿರಿಯ ಆರೋಗ್ಯ ನಿರೀಕ್ಷಕರು ನಗರ ಸಭೆ ಪುತ್ತೂರು ಇವರು ಕಮರ್ಷಿಯಲ್ ಕಟ್ಟಡದಲ್ಲಿ ಇಂಡಸ್ಟ್ರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವುದನ್ನು ದೃಢ ಪಡಿಸಿ ಅಲ್ಲಿ ಉಂಟಾಗುವ ಅಸಹನೀಯ ಶಬ್ದದಿಂದ ತೊಂದರೆಯಾಗುವುದು ಕಂಡು ಬರುತ್ತದೆ ಎಂದು ಪೌರಾಯುಕ್ತರಿಗೆ ವರದಿ ನೀಡಿರುತ್ತಾರೆ
ಹಿರಿಯ ಆರೋಗ್ಯ ನಿರೀಕ್ಷಕರು ನಗರ ಸಭೆ ಪುತ್ತೂರು ಇವರ ವರದಿ ಆಧರಿಸಿ ಪುತ್ತೂರು ನಗರ ಸಭಾ ಆಯುಕ್ತರು ಈಗಾಗಲೇ ಹರ್ಷಿತ್ ಜ್ಯುವೆಲ್ಲರಿ ಇದರ ಮಾಲಕರಾದ ಗಂಗಾಧರ ಆಚಾರ್ಯ ಇವರಿಗೆ ನೀವು ನಗರ ಸಭೆಯಿಂದ ಈ ಉದ್ದಿಮೆ ನಡೆಸಲು ಯಾವುದೇ ಪರವಾನಿಗೆ ಪಡೆದುಕೊಂಡಿರುವುದು ಕಂಡು ಬರುವುದಿಲ್ಲ ಈ ರೀತಿಯ ಉದ್ದಿಮೆ ನಡೆಸಲು ಸ್ಥಳೀಯ ಆಡಳಿತದಿಂದ ಉದ್ದಿಮೆ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿರುತ್ತದೆ ಈ ನೋಟೀಸ್ ತಲುಪಿದ 7 ದಿನದ ಒಳಗಾಗಿ ಸ್ಥಗಿತಗೊಳಿಸಿ ಕಛೇರಿಗೆ ಲಿಖಿತ ವರದಿ ಸಲ್ಲಿಸಲು ಕೋರಿದ್ದಾರೆ ತಪ್ಪಿದ್ದಲ್ಲಿ ಕರ್ನಾಟಕ ಮುನಿಸಿಪಾಲ್ ಕಾಯ್ದೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯ ನೋಟೀಸ್ ನೀಡಿದೆ
ಈ ನೋಟೀಸ್ ನ ಬಗ್ಗೆ ಮಾತನಾಡಿದ ನ್ಯಾಯವಾದಿ ಚಂದ್ರಹಾಸ ಈಶ್ವರಮಂಗಲ ಇವರು ಪೌರಾಯುಕ್ತರ ಸ್ಪಂದನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಅದಲ್ಲದೆ ಸುಳ್ಳು ದಾಖಲೆ ನೀಡಿ ಪಡೆದಿರುವ ವಿದ್ಯುತ್ ಸಂಪರ್ಕ ರದ್ದುಗೊಳಿಸಲು ಮೆಸ್ಕಾಂ ಗೆ ಮನವಿ ಮಾಡಲಾಗುವುದು ಹಾಗೂ ನಗರ ಸಭೆಯ ಪರವಾನಿಗೆ ಇಲ್ಲದೇ ಇದ್ದರೂ ಕೂಡ ಇಂತಹ ಉದ್ಯಮ ನಡೆಸಲು ವಿದ್ಯುತ್ ಸಂಪರ್ಕ ನೀಡಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು