ಪುತ್ತೂರಿನಲ್ಲಿ ಬಸ್ ಸ್ಟ್ಯಾಂಡ್ ಬಳಿ ಕಾರಿನಲ್ಲಿ ಅನೈತಿಕ ಚಟುವಟಿಕೆ ಶಂಕೆ; ಮಾಹಿತಿ ನೀಡಿದ ಭಜರಂಗದಳ! ಪೊಲೀಸರ ಕಣ್ಣು ತಪ್ಪಿಸಿ ಅನ್ಯಕೋಮಿನ ಜೋಡಿ ಎಸ್ಕೇಪ್ !

  • 20 Jun 2025 09:36:09 PM


ಪುತ್ತೂರು: ಪುತ್ತೂರಿನ ಸರಕಾರಿ ಬಸ್ ನಿಲ್ದಾಣದ ಬಳಿ ಇನೋವಾ ಕಾರಿನಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಶಂಕೆಯ ಮೇರೆಗೆ ಬಜರಂಗದಳದ ಕಾರ್ಯಕರ್ತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು,ಆದರೆ ಇದೀಗ ಕುತೂಹಲವನ್ನುಂಟು ಮಾಡಿದೆ.

 

ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸುವಷ್ಟರಲ್ಲಿ, ಅನ್ಯ ಕೋಮಿನ ಜೋಡಿ ಕಾರಿನಲ್ಲಿ ಎಸ್ಕೇಪ್ ಆಗಿದ್ದು, ಕಬಕದತ್ತ ಕಾರು ಓಡಿಸಿದ್ದಾರೆ ಎನ್ನಲಾಗಿದೆ.

 

 ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ಕೂಡಲೇ ಕಬಕದಲ್ಲಿ ವಾಹನವನ್ನು ತಡೆಯಲು ಯತ್ನಿಸಿದರಾದರೂ, ಚಾಲಕ ಪೊಲೀಸ್ ಕಣ್ಗಾವಲಿನಿಂದ ತಪ್ಪಿಸಿಕೊಂಡು ಮಂಗಳೂರು ರಸ್ತೆಯ ದಿಕ್ಕಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅನೈತಿಕ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದ್ದಾರೆ.