ಬಂಟ್ವಾಳ: ಅಡ್ಯನಡ್ಕದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ; ಪಾದಚಾರಿಗೆ ಡಿಕ್ಕಿ ಇಬ್ಬರಿಗೆ ಗಾಯ!

  • 22 Jun 2025 04:58:29 PM


ಬಂಟ್ವಾಳ: ಅಡ್ಯನಡ್ಕ ಸಮೀಪದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ಜೂನ್ 22ರಂದು ಸಂಭವಿಸಿದೆ. 

 

ಬಳಿಕ ಕಾರು ರಸ್ತೆ ಬದಿಯ ದರೆಗೆ ಗುದ್ದಿ ನಿಂತಿದೆ. ಘಟನೆಯಲ್ಲಿ ಪಾದಚಾರಿ ಮತ್ತು ಕಾರು ಚಾಲಕ ಇಬ್ಬರೂ ಗಾಯಗಳಾಗಿವೆ.

 

 ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರ ಸಹಕಾರದೊಂದಿಗೆ ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವ ಮಾಣಿಯಾಣಿ ಅವರ ನೇತೃತ್ವದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿಸಲಾಗಿದೆ ಎನ್ನಲಾಗಿದೆ.

 

ಸ್ಥಳೀಯರು ತಕ್ಷಣ ಸ್ಪಂದನೆ ನೀಡಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ದೊರಕಿಸುವಲ್ಲಿ ನೆರವಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ತನಿಖೆ ನಡೆಯುತ್ತಿದೆ.