ರಾಹುಲ್‌‌‌ ಗಾಂಧಿಯ 4ನೇ ತಲೆಮಾರು ಬಂದರು ಮುಸ್ಲಿಂ ಕೋಟಾಗೆ ಅವಕಾಶ ನೀಡಲ್ಲ!; ಬಹಿರಂಗ ಭಾಷಣದಲ್ಲಿ ಗುಡುಗಿದ ಅಮಿತ್ ಶಾ!

  • 13 Nov 2024 10:42:23 PM


ರಿಪಬ್ಲಿಕ್ ಹಿಂದೂ:- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತೀ ಬಾರಿ ಒಂದಲ್ಲ ಒಂದು ತಮ್ಮ ಟೀಕಾತ್ಮಕ ಹೇಳಿಕೆಯ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮ ವಿರೋಧ ಪಕ್ಷವನ್ನು ಯಾವುದಾದರೂ ಕಾರಣಕ್ಕೆ ನಿಂದಿಸುತ್ತಾ, ರಾಜಕೀಯ ಲಾಭದ ಉದ್ದೇಶದಿಂದ ಅನ್ಯ ಮತೀಯರನ್ನು ಓಲೈಕೆ ಮಾಡುವ ತಂತ್ರವನ್ನು ಕೂಡಾ ಉಪಯೋಗಿಸುತ್ತಿರುತ್ತಾರೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಬಿಸಿ ಮುಟ್ಟುವ ರೀತಿಯಲ್ಲಿ ಖಡಕ್ ಹೇಳಿಕೆಯೊಂದನ್ನು ನೀಡಿದ್ದು ಭಾರೀ ಸಂಚಲನ ಸೃಷ್ಟಿಸಿದೆ. 


*ಕೇಂದ್ರ ಗೃಹಸಚಿವ ಅಮಿತ್ ಷಾ ನೀಡಿದ ಹೇಳಿಕೆಯೇನು..?*

 

ಇಂದು ಚುನಾವಣೆಯ ಪ್ರಚಾರ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಮುಸ್ಲಿಮರಿಗೆ ಮೀಸಲಾತಿ ನೀಡಬೇಕಾದರೆ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಕಡಿತಗೊಳಿಸಬೇಕಾಗುತ್ತದೆ. ರಾಹುಲ್ ಬಾಬಾ, ಸ್ವಲ್ಪ ಯೋಚಿಸಿ. ನೀವು ಮಾತ್ರವಲ್ಲ, ನಿಮ್ಮ ನಾಲ್ಕು ತಲೆಮಾರುಗಳು ಬಂದರೂ, ಅವರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾದ ಕೋಟಾವನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲು ಸಾಧ್ಯವಿಲ್ಲ. ಅದೇನು ಮಾಡಲು ಸಾಧ್ಯನಾ ಮಾಡಿ ನೋಡೋಣ ಎಂದು ಕಿಡಿಕಾರಿದ್ದಾರೆ

 

*ಇಂದಿರಾಗಾಂಧಿ ಸ್ವರ್ಗದಿಂದ ಹಿಂತಿರುಗುದ್ರೂ ಅದು ಸಾಧ್ಯನೇ ಇಲ್ಲ....!!*

 

ಅಷ್ಟೇ ಅಲ್ಲ. ಮುಸ್ಲಿಮರಿಗೆ ಮೀಸಲಾತಿ ಮಾತ್ರವಲ್ಲ ಏನೇ ಬಂದರೂ 370ನೇ ವಿಧಿಯನ್ನು ಕೂಡಾ ಮರುಸ್ಥಾಪಿಸಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿದರೂ, 370 ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಪುನರುಚ್ಚರಿಸಿ
ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮಹಾ ವಿಕಾಸ್ ಅಘಾಡಿ ಔರಂಗಜೇಬ್ ಅಭಿಮಾನಿಗಳ ಕ್ಲಬ್ ಆಗಿದೆ ಎಂದು ವ್ಯಂಗ್ಯವಾಡಿದರು. ಮತ್ತು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಶಿವಾಜಿ ಮಹಾರಾಜ್ ಮತ್ತು ವೀರ್ ಸಾವರ್ಕರ್ ಅವರ ಆದರ್ಶಗಳಿಗೆ ಬದ್ಧವಾಗಿದೆ ಎಂದು ಶಾ ಹೇಳಿದರು.