ತಮಿಳುನಾಡಿನ ತಿರುಪೂರ್ನಲ್ಲಿ ಹಿಂದೂ ಮುನ್ನಾನಿ ನಾಯಕನ ಭೀಕರ ಹತ್ಯೆ; ಪೊಲೀಸರ 3 ತಂಡಗಳ ತನಿಖೆ ಆರಂಭ!

  • 25 Jun 2025 05:34:39 PM


ತಿರುಪೂರ್ : ತಮಿಳುನಾಡಿನ ತಿರುಪೂರಿನಲ್ಲಿ ಮಂಗಳವಾರ ಬೆಳಗಿನ ಜಾವ ಹಿಂದೂ ಮುನ್ನಾಣಿ ಸಂಘಟನೆಯ ಪ್ರಮುಖ ಸದಸ್ಯನನ್ನು ಮೂವರು ಅಪರಿಚಿತರು ಭೀಕರವಾಗಿ ಹತ್ಯೆ ಮಾಡಿದ್ದಾರೆ.

 

 ಮೃತರನ್ನು ಬಾಳಮುರುಗನ್ (30) ಎಂದು ಗುರುತಿಸಲಾಗಿದೆ. ಅವರು ಹಿಂದೂ ಮುನ್ನಾಣಿ ತಿರುಪೂರ್ ನಾರ್ಥ್ ಟೌನ್ ಅಧ್ಯಕ್ಷರಾಗಿದ್ದರು ಮತ್ತು ಕಾನೂನು ವಿಭಾಗದಲ್ಲಿ ಸಕ್ರಿಯರಾಗಿದ್ದರು.

 

ಪೊಲೀಸರ ಪ್ರಕಾರ, ಬಾಳಮುರುಗನ್ ಅವರು ತಮ್ಮ ಮನೆ ಹೊರಗೆ ಬೈಕ್‌ನಲ್ಲಿ ನಿಂತಿದ್ದ ಸಮಯದಲ್ಲಿ ಸುಮಾರು ಬೆಳಿಗ್ಗೆ 4 ಗಂಟೆಯ ಹಾಗೆ ಮೂವರು ವ್ಯಕ್ತಿಗಳು ಅವರ ಮೇಲೆ ದಾಳಿ ನಡೆಸಿದ್ದು, ತೀವ್ರವಾಗಿ ಹೊಡೆದು ಕೊಲೆ ಮಾಡಿದ್ದಾರೆ. 

 

ಈ ಘಟನೆಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

 

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿರುಪೂರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೂವರು ವಿಶೇಷ ತನಿಖಾ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ. 

 

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಶಂಕಿತರನ್ನು ವಿಚಾರಣೆ ಮಾಡಲಾಗುತ್ತಿದೆ.

 

ಈ ದುಷ್ಕೃತ್ಯವು ತಿರುಪೂರಿನಲ್ಲಿ ಭಯಚಳನೆ ಮೂಡಿಸಿದ್ದು, ಹಿಂದೂ ಮುನ್ನಾಣಿ ಸದಸ್ಯರು ಮತ್ತು ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ. 

 

ಕೊಲೆಯ ಹಿಂದೆ ರಾಜಕೀಯ ಅಥವಾ ಸಂಘಟನೆಯ ನಿಲುವುಗಳಿಗೆ ಸಂಬಂಧಿಸಿದ ಕಾರಣಗಳಿವೆಯೆ ಎಂಬ ಬಗ್ಗೆ ತನಿಖೆ ಮುಂದುವರಿಯುತ್ತಿದೆ.