ಪುತ್ತೂರು, ಜೂನ್ 25: ಸಹಪಾಠಿಯಾಗಿ ಪರಿಚಯವಾಗಿದ್ದ ಯುವತಿಯೊಂದಿಗೆ ಪ್ರೀತಿ ನಾಟಕವಾಡಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿ ಮಾಡಿದ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಭೀರ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿ ಮಾಡಿ ಇದೀಗ ತಲೆಮರೆಸಿಕೊಂಡಿದ್ದಾನೆ.
ಆರೋಪಿ ಪುತ್ತೂರಿನ ನಿವಾಸಿಯಾಗಿರುವ ರಾಜಕೀಯ ಮುಖಂಡರ ಪುತ್ರ ಕೃಷ್ಣ ರಾವ್ (21) ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಯುವಕ ಪರಾರಿಯಾಗಿದ್ದು, ಪೊಲೀಸರು ಇದೀಗ ತನಿಖೆ ಮುಂದುವರೆಸಿದ್ದಾರೆ.
ವಂಚನೆಗೊಳಗಾದ ಯುವತಿಯು ಪುತ್ತೂರಿನ ಯುವತಿಯೇ ಆಗಿದ್ದು, ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದ ವೇಳೆ 2024ರ ಅಕ್ಟೋಬರ್ 11ರಂದು ಮೊಟ್ಟಮೊದಲ ಬಾರಿಗೆ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನೆಂದೂ ಬಳಿಕ ಮತ್ತೊಮ್ಮೆ ಅದೇ ರೀತಿಯಾಗಿ ಕರೆಸಿ ಮದುವೆಯಾಗುವುದಾಗಿ ನಂಬಿಸಿದ್ದ ದೈಹಿಕ ಸಂಪರ್ಕ ಬೆಳೆಸಿದ್ದನೆಂದು ಇದೀಗ ಆಕೆ ಒಂಬತ್ತು ತಿಂಗಳ ಗರ್ಭಿಣಿಯಾಗಿರುತ್ತಾಳೆ.
ಆದರೆ ಇದೀಗ ಆರೋಪಿ ಮದುವೆಗೆ ನಿರಾಕರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಈ ವಿಚಾರದ ಕುರಿತಾಗಿ ಚರ್ಚೆಯಾಗಿದ್ದು ಯುವತಿ ತನ್ನ ಮನೆಯವರಿಗೆ ಮಾಹಿತಿ ನೀಡಿದ ನಂತರ ಮದುವೆ ಸಂಬಂಧ ಮಾತುಕತೆ ನಡೆದು ಆತನ ಮನೆಯವರು ಸಹ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ಕೃಷ್ಣ ರಾವ್ ಮದುವೆಗೆ ಮುಂದಾಗದೆ ಬದಿಗೆ ಸರಿದಿದ್ದಾನೆ ಎನ್ನಲಾಗಿದೆ.
ಯುವತಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಠಾಣೆಯಲ್ಲಿ ಮನವಿ ಸಲ್ಲಿಸಲಾಗಿದೆ.
ಪೊಲೀಸರು ಆರೋಪಿಯನ್ನು ಶೀಘ್ರವೇ ಬಂಧಿಸುವ ನಿರೀಕ್ಷೆಯಿದೆ.