ಕರ್ನಾಟಕದಲ್ಲಿ ಹಲವಾರು ವರ್ಷಗಳಿಂದ ವಾಸವಿರುವ ಮುಖಾರಿ ಸಮುದಾಯದಿಂದ ಜಾತಿ ಪ್ರಮಾಣ ಪತ್ರ ಪಡೆಯಲು ರಿಟ್ ಅರ್ಜಿ ಸಲ್ಲಿಕೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಿಂದ ಸರಕಾರಕ್ಕೆ ನೋಟೀಸು

  • 26 Jun 2025 10:23:31 PM


ಮುಖಾರಿ/ಮೂವಾರಿ ಸಮುದಾಯ ಕರ್ನಾಟಕದಲ್ಲಿ ಅದೆಷ್ಟೋ ವರ್ಷಗಳಿಂದ ವಾಸವಿರುವ ಒಂದು ಸಮಾಜ ಸಂಖ್ಯೆಯಲ್ಲಿ ಕಡಿಮೆ ಇರುವ ಕಾರಣ ಇವರಿಗೆ ಇಲ್ಲಿಯವರೆಗೆ ಯಾವುದೇ ಸರಕಾರ ಸಹಾಯ ಮಾಡುವ ಮನಸ್ಸು ಮಾಡಲೇ ಇಲ್ಲ ಹಾಗೂ ಈ ಸಮುದಾಯದಲ್ಲಿ ಅತೀ ವಿದ್ಯಾವಂತರು ಇರುವುದು ಕೂಡ ಕಡಿಮೆ ಕೆಲವು ಬೆರಳೆಣಿಕೆಯಷ್ಟು ಜನ‌ ಮಾತ್ರ ಇದ್ದಾರೆ ಆದರೆ ಈಗ ಕಾಲ ಬದಲಾಗಿ ಅವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಶಾಲೆಗಳಲ್ಲಿ ಮೊದಲು ಕೇಳುವುದು ಜಾತಿ ಪ್ರಮಾಣ ಪತ್ರ ಒಂದು ಸ್ಕಾಲರ್ಶಿಪ್ ಪಡೆಯಲು ಕೂಡ ಬೇಕಾಗಿರುವುದು ಜಾತಿ ಪ್ರಮಾಣ ಪತ್ರ ಹಾಗೂ ಯಾವುದೇ ಸರಕಾರದ ಸೌಲಭ್ಯ ಪಡೆಯಲು ಕೂಡ ಅಗತ್ಯ ಇರುವುದು ಜಾತಿ ಪ್ರಮಾಣ ಪತ್ರ ಆದರೆ ನಮ್ಮ ಕರ್ನಾಟಕ ಸರಕಾರ ಇಲ್ಲಿಯವರೆಗೆ ಮನಸ್ಸು ಮಾಡಲಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸುಳ್ಯ ತಾಲೂಕಿನಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ ಈ ಹಿಂದಿನಿಂದಲೂ ಈ ಸಮುದಾಯದ ಹಿರಿಯರು ಅದೆಷ್ಟೋ ಹೋರಾಟ ನಡೆಸಿದರೂ ಕೂಡ ಇದು ಯಾವುದೇ ಪ್ರಯೋಜನ ಕಾಣಲಿಲ್ಲ ಪುತ್ತೂರಿನ ಖ್ಯಾತ ವೈದ್ಯರಾದ ಪ್ರಸಾದ್ ಭಂಡಾರಿ ಅವರ ನೇತ್ರತ್ವದಲ್ಲಿ ಅನೇಕ ಪ್ರಯತ್ನ ನಡೆದಿದ್ದವು ಆದರೆ ಅದು ಯಾವುದೂ ಕೂಡ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಲಿಲ್ಲ ಅವರ ಹೋರಾಟ ಕೇವಲ ಮುಖಾರಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕುರಿತಾಗಿ ಇತ್ತು ಅದು ಕೂಡ ಇಲ್ಲಿಯವರೆಗೆ ಪ್ರಯೋಜನಕಾರಿಯಾಗಿಲ್ಲ

ಇಷ್ಟೆಲ್ಲ ಪ್ರಯತ್ನಗಳು ನಡೆದು ಯಾವುದೇ ಪ್ರಯೋಜನವಾಗದೆ ಮುಖಾರಿ ಸಮುದಾಯ ಹತಾಶೆಯ ಮನೋಭಾವದಿಂದ ಈ ಹೋರಾಟವನ್ನು ಬಿಟ್ಟು ತಮ್ಮ ಪಾಡಿಗೆ ಇದ್ದರು ಈ ವಿಷಯವನ್ನು ಮನಗಂಡ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ಈಶ್ವರಮಂಗಲ ಇವರು ಮತ್ತೊಮ್ಮೆ ಮುಖಾರಿ ಸಮುದಾಯದ ಹಿರಿಯರನ್ನು ಸೇರಿಸಿ ಸಭೆ ಮಾಡಿ ಸಂಭವಿಸಿದ ದಾಖಲೆಗಳನ್ನು ನೋಡಿ ಇವರ ಹೋರಾಟದ ರೀತಿಯೇ ತಪ್ಪಾಗಿದ್ದು ನಾವು ಸರಿಯಾದ ದಾರಿಯಲ್ಲಿ ಸಾಗಿದ್ದರೆ ನಮಗೆ ಈ ಮೊದಲೇ ನ್ಯಾಯ ಸಿಗುತ್ತಿತ್ತು ಎಂದು ಅವರಿಗೆ ತಿಳಿಸಿ ಈ ಕುರಿತು ನಾವು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಮೊರೆ ಹೋಗೋಣ ನಮ್ಮ ಕೊನೆಯ ಪ್ರಯತ್ನ ಮಾಡೋಣ ಎಂದು ಮತ್ತೊಮ್ಮೆ ಈ ಸಮುದಾಯಕ್ಕೆ ನ್ಯಾಯಕ್ಕಾಗಿ ಹೋರಾಡುವ ಭರವಸೆ ನೀಡಿ ನಾನು ನಿಮ್ಮೊಂದಿಗೆ ನಿಂತು ನಿಮ್ಮವನಾಗಿ ಕೆಲಸ ಮಾಡುತ್ತೇನೆಂದು ಅವರ ನೇತ್ರತ್ವ ತೆಗೆದುಕೊಂಡರು

ನೇತ್ರತ್ವ ಪಡೆದ ನಂತರ  ಹೈಕೋರ್ಟ್ ನ ವಕೀಲರಾದ ರಾಜಾರಾಮ್ ಸೂರ್ಯಂಬೈಲು ಅವರ ಮಾರ್ಗದರ್ಶನದಂತೆ  ಮೊದಲನೇಯದಾಗಿ ಪುತ್ತೂರು ತಾಲೂಕು ತಹಶಿಲ್ದಾರರಿಗೆ ಆ ಊರಿನ‌ ಮುಖಾರಿ ಸಮುದಾಯದ 20 ಶಾಲಾ ಮಕ್ಕಳ ಹೆಸರಿನಲ್ಲಿ ನಮಗೆ ಜಾತಿ ಪ್ರಮಾಣ  ಪತ್ರ ನೀಡಿ ಎಂದು ಅರ್ಜಿ ಸಲ್ಲಿಸಲಾಯಿತು ಮಾನ್ಯ ಗ್ರಾಮ ಆಡಳಿತ ಅಧಿಕಾರಿಗಳು ಈ ವಿಚಾರವಾಗಿ ಸರಕಾರದ ಜಾತಿ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಎಂಬ ವರದಿ ನೀಡಿದರು ಇವರ ವರದಿ ಆದರಿಸಿ ಕಂದಾಯ ನಿರೀಕ್ಷಕರು ಕೂಡ ಇದೇ ವರದಿ ತಹಶಿಲ್ದಾರರಿಗೆ ನೀಡಿದರು ಈ ಎಲ್ಲ ವರದಿ ಆದರಿಸಿ ಮಾನ್ಯ ತಹಶಿಲ್ದಾರರು ಕರ್ನಾಟಕ ಸರಕಾರದ ತಂತ್ರಾಂಶದಲ್ಲಿ ಮುಖಾರಿ ಜಾತಿ ದಾಖಲಾಗದ ಕಾರಣ ಜಾತಿ ಪ್ರಮಾಣ ಪತ್ರ ನೀಡಲು ಸಾದ್ಯವಿಲ್ಲ ಎಂದು ಹಿಂಬರಹ ನೀಡಿದರು

ಮಾನ್ಯ ಪುತ್ತೂರು ತಾಲೂಕು ತಹಶಿಲ್ದಾರರು ನೀಡಿದ ಹಿಂಬರಹವನ್ನು ಪ್ರಶ್ನಿಸಿ ಉದಯ ಮುಖಾರಿ ಮತ್ತು ಇತರರ ಹೆಸರಿನಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಹೈಕೋರ್ಟ್ ವಕೀಲರಾದ ರಾಜಾರಾಮ್ ಸೂರ್ಯಂಬೈಲು ಇವರು ಮತ್ತು ನಿತೇಶ್ ರೈ ಕೋಟೆ ಹಾಗೂ ಪುತ್ತೂರಿನ ನ್ಯಾಯವಾದಿ ಚಂದ್ರಹಾಸ ಈಶ್ವರಮಂಗಲ ರಿಟ್ ಅರ್ಜಿ ಸಲ್ಲಿಸಿದರು

ಜಾತಿ ಪ್ರಮಾಣ ಪತ್ರ ಪಡೆಯುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು ಹಾಗೂ ಮೂಲಭೂತ ಹಕ್ಕು ಶಾಲಾ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು ಯಾವುದಾದರು ಸರಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಮನೆ ನಿರ್ಮಾಣ ಮಾಡಲು ಸರಕಾರ ಸಹಾಯಧನ ಪಡೆಯಲು ಜಾತಿ ಪ್ರಮಾಣ ಪತ್ರ ಅತೀ ಅವಶ್ಯವಾದದ್ದು ಹಾಗೂ ಈ ಸಮುದಾಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆ ಸಮುದಾಯಕ್ಕೆ ಜಾತಿ ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಹೈಕೋರ್ಟ್ ನ ವಕೀಲರಾದ ರಾಜಾರಾಮ್ ಸೂರ್ಯಂಬೈಲು ಅವರು ಪ್ರಭಲ ವಾದ ಮಂಡಿಸಿ  ನ್ಯಾಯಾಲಯದ ಗಮನ ಸೆಳೆದರು ವಾದವನ್ನು ಆಲಿಸಿದ ಮಾನ್ಯ ಉಚ್ಛ ನ್ಯಾಯಾಲಯ ಜಾತಿ ಪ್ರಮಾಣ ಪತ್ರ ಪಡೆಯಲು ತಂತ್ರಾಂಶದಲ್ಲಿ ಅವಕಾಶ ಇಲ್ಲದೇ ಇರುವ ಕಾರಣ ಈ ಕುರಿತು ಉತ್ತರ ಕೇಳಿ ಕರ್ನಾಟಕ ಸರಕಾರಕ್ಕೆ ನೋಟೀಸು ಮಾಡಿದೆ

ಮುಖಾರಿ ಸಮುದಾಯದ ಪರವಾಗಿ ಹೈಕೋರ್ಟ್ ನ ಖ್ಯಾತ ನ್ಯಾಯವಾದಿ ರಾಜಾರಾಮ್ ಸೂರ್ಯಂಬೈಲು   ಮತ್ತು ನಿತೇಶ್ ರೈ ಕೋಟೆ ಹಾಗೂ ಪುತ್ತೂರಿನ ನ್ಯಾಯವಾದಿ ಚಂದ್ರಹಾಸ ಈಶ್ವರಮಂಗಲ ವಕಾಲತ್ತು ವಹಿಸಿದರು

ಈ ಕುರಿತು ಹಿಂದು ರಿಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ನ್ಯಾಯವಾದಿ ಚಂದ್ರಹಾಸ ಈಶ್ವರಮಂಗಲ ಮುಖಾರಿಗಳು ಅದೆಷ್ಟೋ ವರ್ಷಗಳಿಂದ ಇದ್ದಾರೆ ಅವರಿಗೆ ಆಧಾರ್ ಓಟರ್ ಐಡಿ  ಪಾನ್ ಕಾರ್ಡ್ ಎಲ್ಲಾ ಭೂಮಿಯ ದಾಖಲೆ ಇದೆ ಆದರೂ ಅವರಿಗೆ ಜಾತಿ ಪ್ರಮಾಣ ಪತ್ರ ಇನ್ನೂ ಸಿಕ್ಕಿಲ್ಲ  ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ಇನ್ನು ಮುಂದಕ್ಕೆ ಈ ವಿಚಾರವಾಗಿ ಸರಕಾರದ ಗಮನ ಸೆಳೆಯುವ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು