ಮಂಗಳೂರು: ಸುಮಾರು 12 ವರ್ಷಗಳ ಹಿಂದೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಕ್ಕಳ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಗುರುವಾರ ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.
ಆರೋಪಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಸೋಮವಾರ (ಜುಲೈ 1) ರಂದು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಶಿಕ್ಷೆಗೆ ಗುರಿಯಾದವರು ಲೆನೆಟ್ ವೇಗಸ್, ಜೊಸ್ಸಿ ವೇಗಸ್ ಮತ್ತು ಲಸ್ಸಿ ವೇಗಸ್ ಎಂಬವರಾಗಿದ್ದಾರೆ.
ಈ ಪ್ರಕರಣವು 2013ರಲ್ಲಿ ಬೆಳಕಿಗೆ ಬಂದಿದ್ದು, ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮನೆ ಮನೆಗೆ ಹೋಗಿ ಮಕ್ಕಳ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಲೆನೆಟ್ ವೇಗಸ್ರ ಮನೆಯಲ್ಲಿ ಮಾರಾಟಕ್ಕೆ ಮಗುವೊಂದನ್ನು ಇಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿ, ಈ ಮಾಹಿತಿಯನ್ನು ಪತ್ರಕರ್ತ ನವೀನ್ ಸೂರಿಂಜೆ ಅವರ ಗಮನಕ್ಕೆ ತಂದಿದ್ದು, ಬಳಿಕ ಚೈಲ್ಡ್ಲೈನ್ ಸದಸ್ಯರು ಮಗುವಿನ ಕುರಿತು ತನಿಖೆ ನಡೆಸಿದರು.
ಲೆನೆಟ್ ಮಗು ತನ್ನದೇ ಎಂದು ನರ್ಸಿಂಗ್ ಹೋಮ್ನ ಡಿಸ್ಚಾರ್ಜ್ ದಾಖಲೆಯನ್ನೂ ತೋರಿಸಿದ್ದರು ಆದರೆ ನಂತರದ ತನಿಖೆಯಲ್ಲಿ ಮಗು ಉತ್ತರ ಕರ್ನಾಟಕದ ಚೆನ್ನವ್ವ ಎಂಬ ಮಹಿಳೆಯ ಮಗು ಎಂದು ದೃಢಪಟ್ಟಿತು.
ಬಡತನದ ಕಾರಣಕೆ ಮಗುವನ್ನು ಲೆನೆಟ್ಗೆ ಸುಮಾರು ₹20,000ಕ್ಕೆ ಮಾರಾಟ ಮಾಡಲಾಗಿತ್ತು ಎಂದೂ ತಿಳಿದು ಬಂದಿತು.
ಪತ್ರಕರ್ತ ನವೀನ್ ಸೂರಿಂಜೆ, ಚೈಲ್ಡ್ ಲೈನ್ನ ರೆನ್ನಿ ಡಿಸೋಜ, ಅಸುಂತ ಡಿಸೋಜ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಹಾಗೂ ಅಂಗನವಾಡಿ ಕಾರ್ಯಕರ್ತೆಯ ಸಹಕಾರದೊಂದಿಗೆ, ಪೊಲೀಸರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡು ಮಗುವನ್ನು ಮಾರಾಟ ಮಾಡುವ ವೇಳೆ ಲೆನೆಟ್ನನ್ನು ಬಂಧಿಸಲಾಯಿತು.
ಈ ಸಂದರ್ಭದಲ್ಲಿ ನಕಲಿ ದಾಖಲೆಗಳು, ಎಟಿಎಂ ಕಾರ್ಡ್ಗಳು ಮತ್ತು ವಿಝಿಟಿಂಗ್ ಕಾರ್ಡ್ಗಳು ವಶಪಡಿಸಿ ತೇದು ಕೊಲ್ಲಲಾಯಿತು.
ಆಕೆಯ ಮೇಲೆ ಪ್ರಕರಣ ದಾಖಲಿಸಿ, ಲೆನೆಟ್ಗೆ ಸಹಕಾರ ನೀಡಿದಂತಹ ಜೊಸ್ಸಿ ವೇಗಸ್ ಮತ್ತು ಲಸ್ಸಿ ವೇಗಸ್ ಮೇಲೂ ಕ್ರಮ ಜರುಗಿಸಲಾಯಿತು....
ಇದೀಗ, ಬಹುಕಾಲದ ನಂತರ ನ್ಯಾಯಾಲಯದಿಂದ ನ್ಯಾಯ ದೊರೆಕಿರುತ್ತದೆ..