ಮೂಡುಬಿದಿರೆ: ಹಿಂದು ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಹ ಸಂಯೋಜಕರಾದ ಸಮಿತ್ ರಾಜ್ ಧರೆಗುಡ್ಡೆಯ ಬಂಧನವನ್ನು ಸಂಘಟನೆಯು ಕಠಿಣವಾಗಿ ಖಂಡಿಸಿದೆ.
ಈ ಬಂಧನದ ಹಿಂದೆ ರಾಜಕೀಯ ಪ್ರೇರಣೆಯಿದೆ ಎಂದು ಆರೋಪಿಸಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ನಡೆದಿದ್ದ ರಸ್ತೆ ಅಪಘಾತದಲ್ಲಿ ಬಸ್ ಚಾಲಕನ ಅಜಾಗರೂತನದಿಂದ ಬೈಕ್ ಮತ್ತು ಆಟೋ ರಿಕ್ಷಾಗೆ ಡಿಕ್ಕಿಯಾಗಿ ಕೆಲವರು ಗಂಭೀರ ಗಾಯಗೊಂಡಿದ್ದರು.
ಗಾಯಾಳುಗಳು ಬಡ ಕುಟುಂಬದಿಂದವರಾಗಿದ್ದು, ಘಟನೆಯ ಸ್ಥಳದಲ್ಲೇ ಬಸ್ ಮಾಲಿಕರಿಂದ ಪರಿಹಾರ ಪಡೆಯಲು ಸಮಿತ್ ರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.
ಇದರ ಪರಿಣಾಮವಾಗಿ, ಮಂಗಳೂರು ಗ್ರಾಮಾಂತರ ಪೊಲೀಸರ ಸಮನ್ವಯದಲ್ಲಿ ಬಸ್ ಮಾಲಿಕ ಗಾಯಾಳುಗಳಿಗೆ ಪರಿಹಾರ ಹಣವನ್ನು ಕೂಡ ನೀಡಿದ್ದರು.
ಈ ಘಟನೆಗೆ ಸಂಬಂಧಪಟ್ಟಂತೆ ಕೆಲ ಕಾಲೇಜು ವಿದ್ಯಾರ್ಥಿಗಳು ಬಸ್ಸಿಗೆ ಹಾನಿಎನ್ನು ಉಂಟು ಮಾಡಿದ್ದು, ಬಸ್ ಮಾಲಿಕರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೆ, ಪೊಲೀಸರು ಕಳೆದ ಆರು ತಿಂಗಳವರೆಗೆ ಯಾವುದೇ ವಿಚಾರಣೆ ನಡೆಸದೆ, ನಿನ್ನೆ ಯಾವ ನೋಟಿಸು ಸಹ ನೀಡದೆ ಸಮಿತ್ ರಾಜ್ ಅವರನ್ನು ಬಂಧಿಸಿರುತ್ತಾರೆ.
ಈ ಬಂಧನವನ್ನು "ರಾಜಕೀಯ ಪ್ರೇರಿತ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಹಿಂದು ಜಾಗರಣ ವೇದಿಕೆಯು "ಬಡ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಕೈಗೊಂಡಿರುವ ಈ ಸಹಾನುಭೂತಿ ಕ್ರಮವೇ ಅಪರಾಧವೆಂದರೆ, ಅದರಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳನ್ನೂ ಬಂಧಿಸಬೇಕು" ಎಂಬುದಾಗಿ ಒತ್ತಾಯಿಸಿದ್ದಾರೆ
ಹಿಂದು ಜಾಗರಣ ವೇದಿಕೆಯು ದಕ್ಷತೆಯ ಕಾನೂನು ಕ್ರಮಗಳಿಗೆ ಸಹಕಾರ ನೀಡುತ್ತದೆಯೆಂದೂ ದಕ್ಷತೆಯ ವೇಳೆ ಹಿಂದೂಗಳನ್ನು ದಮನಿಸಲಿ ಹೊರಟರೆ ಕಾನೂನಾತ್ಮಕವಾಗಿ ಇಡೀ ಹಿಂದು ಸಮುದಾಯದಿಂದ ತೀವ್ರ ಪ್ರತಿಭಟನೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದೆ.