ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಕ್ರಮಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಆಘಾತಕಾರಿ ಘಟನೆಯ ವೇಳೆ ಉಂಟಾದ ಕಳವಳದಿಂದಾಗಿ 11 ಮಂದಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.
ಭದ್ರತೆ, ಭೀತಿ ನಿರ್ವಹಣೆ ಹಾಗೂ ಜನಸಂಚಾರ ನಿಯಂತ್ರಣದಲ್ಲಿ ಲೋಪ ಸಂಭವಿಸಿದ್ದರಿಂದ ರಾಜ್ಯ ಸರ್ಕಾರ ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಎಂಬ ಮೂವರು ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿತ್ತು.
ಈ ಸಂಬಂಧ ರಾಜ್ಯ ಸರ್ಕಾರದ ವರದಿಯನ್ನು ಪರಿಶೀಲಿಸಿದ ಕೇಂದ್ರ ಸರ್ಕಾರ, ಆ ಮೂರು ಅಧಿಕಾರಿಗಳ ಅಮಾನತು ಕ್ರಮಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಸಂಬಂಧಿತ ಮಾಹಿತಿಯನ್ನು ಡಿಪಿಎಆರ್ಗೆ ರವಾನೆ ಮಾಡಿದೆ. ಈ ಮೂವರು ಹಿರಿ ಅಧಿಕಾರಿಗಳನ್ನೂ ಕರ್ತವ್ಯ ಲೋಪದಡಿ ಅಮಾನತು ಮಾಡಲಾಗಿದೆ.