ಪೆರ್ಲ ಎರುಗಲ್ಲು ಪ್ರದೇಶದಲ್ಲಿ ಸಿಡಿಲು ಬಡಿದು ಮನೆ ಹಾನಿ: ಭಾಗ್ಯವಶಾತ್ ಅಪಾಯದಿಂದ ಪಾರಾದ ಮನೆ ಮಂದಿ

  • 15 Nov 2024 03:56:40 PM

ಕಾಸರಗೋಡು: ಪೆರ್ಲ ಎಣ್ಮಕಜೆ ಪಂಚಾಯತ್‌ನ ಸಾಯ ವಾರ್ಡ್, ಎರುಗಲ್ಲು ಪ್ರದೇಶದಲ್ಲಿ ನಿನ್ನೆ ರಾತ್ರಿ 7 ಗಂಟೆಗೆ ಸಿಡಿಲು ಬಡಿದು ಉದಯ ಶಂಕರ ಮೂಲ್ಯ ಅವರ ಮನೆಯು ಹಾನಿಗೊಳಗಾಯಿತು.

 

ಸಿಡಿಲಿನ ತೀವ್ರತೆಯು ಮನೆಗೆ ಗಂಭೀರ ಬಿರುಕನ್ನುಂಟು ಮಾಡಿದೆ . ಭಾಗ್ಯವಶಾತ್ ಮನೆಯಲ್ಲಿರುವ ಇಬ್ಬರು ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ.

 

ಈ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.