ಪುತ್ತೂರು : ಹಿಂದೂ ಬಿಲ್ಲವ ಹೆಣ್ಣು ಮಕ್ಕಳನ್ನು ಹಾಗೂ ಭಜನೆ ಸಂಕೀರ್ತನೆಯನ್ನು ನೀಚ ಭಾವದಿಂದ ವ್ಯಕ್ತಪಡಿಸಿದ ಅರಣ್ಯ ಸಂರಕ್ಷಣ ಅಧಿಕಾರಿ ಸಂಜೀವ ಕಣಿಯೂರು.
ಸಂಜೀವ ಕಣಿಯೂರು ಅವರನ್ನು ಬಂಧಿಸಬೇಕು ಎಂಬ ಕೋರಿಕೆಯ ಮೇರೆಗೆ ಪುತ್ತೂರು ಡಿ ವೈ ಎಸ್ ಪಿ ಕಚೇರಿಯಲ್ಲಿ ಹಿಂಜಾವೆ ಭಜನೆಯ ಮೂಲಕ ದಿನಾಂಕ 18/10/2024 ರಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು .ಇದರ ಪರಿಣಾಮವಾಗಿ ಸಂಜೀವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದರು ಇದು ಸಂಘಟನೆಯ ಜಯ ಎಂದು ಪ್ರಮುಖರು ತಿಳಿಸಿದರು.
ಆದರೆ ಕಾನೂನಿನ ಕೆಲವು ವೈಫಲ್ಯತೆಯನ್ನು ಉಪಯೋಗಿಸಿ ಸಂಜೀವ ಕಣಿಯೂರು ಅವರು ಜಾಮೀನು ಪಡೆಯಲು ಸಮರ್ಥರಾದರು
ಇದರ ಮಧ್ಯದಲ್ಲಿ ಪೊಲೀಸರಿಗೆ ಅದೆಷ್ಟೋ ಒತ್ತಡ ಇದ್ದರೂ ಅದನ್ನು ಲೆಕ್ಕಿಸದೆ ಸಂಜೀವನನ್ನೂ ಬಂದಿಸಿದ ಪೊಲೀಸರು ಅಭಿನಂದನಾರ್ಹರು.
ಎಂದು ಸಂಘಟನೆಯ ಮೂಲಗಳು ತಿಳಿಸಿವೆ.
ಆದ್ದರಿಂದ ಮುಂದಿನ ಹೋರಾಟದ ಬಗ್ಗೆ ಇಂದು ತಾರೀಕು 19/10/2024 ರಂದು ಮಂಗಳೂರಿನಲ್ಲಿ ಹಿಂದು ಜಾಗರಣ ವೇದಿಕೆಯ ಉನ್ನತ ಮಟ್ಟದ ಸಭೆ ನಡೆಯಲಿದೆ, ಅವನನ್ನು ಕೆಲಸದಿಂದ ವಜಾ ಮಾಡುವವರೆಗೆ ವಿರಮಿಸುವುದಿಲ್ಲ ಎಂದು ಸಂಘಟನೆಯ ಮೂಲಗಳು ತಿಳಿಸಿವೆ.