ಹಿಂದೂ ರಿಪಬ್ಲಿಕ್ :- ವರ್ಷಗಳ ಕಾಲ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಕೂಡ ಮದುವೆಯಾದ ಪತಿಯ ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ್ದಕ್ಕೆ ಪ್ರತಿನಿತ್ಯ ಮಾನಸಿಕ ಹಿಂಸೆ ನೀಡಿ, ದೈಹಿಕ ಹಲ್ಲೆ ನಡೆಸಿ ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಪತ್ನಿಯು ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಘಟನೆಯ ವಿವರ :-
ಉಳ್ಳಾಲದ ಸಮ್ಮರ್ ಸ್ಯಾಂಡ್ ನಿವಾಸಿಯಾಗಿದ್ದ ದಿಲ್ಫಾನ್ ಎಂಬಾತನನ್ನು ಯುವತಿಯೊಬ್ಬಳು ನಾಲ್ಕು ವರ್ಷಗ ಕಾಲ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದಳು. ಮದುವೆಯ ವೇಳೆ ವರದಕ್ಷಿಣೆಯಾಗಿ ಹುಡುಗಿಯ ತಂದೆ ದಿಲ್ಫಾಲ್ ಗೆ 22 ಪವನ್ ಚಿನ್ನ ಹಾಗೂ 50000 ಮೊತ್ತದ ವಾಚ್ ಕೂಡ ನೀಡಿದ್ದರು. ಕೆಲ ಸಮಯ ಪತ್ನಿಯೊಂದಿಗೆ ಚೆನ್ನಾಗಿದ್ದ ಈತ ಆ ಬಳಿಕ ತನ್ನ ನರಿ ಬುದ್ಧಿ ತೋರಿಸಿದ್ದಾನೆ.
ಪತ್ನಿಯ ತಂದೆ ಕೊಟ್ಟ ಚಿನ್ನಾಭರಣವನ್ನು ನುಂಗಿ ನೀರು ಕುಡಿದ ದಿಲ್ಫಾಲ್ ಆ ಬಳಿಕ ಪರಸಂಗಕ್ಕೆ ಇಳಿದುಬಿಟ್ಟ. ಇದನ್ನು ಪತ್ನಿ ಪ್ರಶ್ನಿಸಿದಾಗ ಆಕೆಗೆ ದೈಹಿಕ ಹಲ್ಲೆ ನಡೆಸಿ, ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾನೆ.
2024ರ ನವೆಂಬರ್ 8 ರಂದು ದಿಲ್ಫಾಲ್ ಹಾಗೂ ಆತನ ತಂದೆ ಚಿತ್ರಹಿಂಸೆ ನೀಡಿ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.ಸದ್ಯ, ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.