ಜೀತು ನೇಲ್ಯಪಲ್ಕೆ ಅವರ ಕುಟುಂಬಕ್ಕೆ ಬಜರಂಗದಳದಿಂದ ನೆರವು: ₹25,950 ದೇಣಿಗೆಯ ಹಸ್ತಾಂತರ

  • 23 Nov 2024 02:45:08 PM


ನೇಲ್ಯಪಲ್ಕೆ: ಆದಿದ್ರಾವಿಡ ಸಮುದಾಯದ ಜೀತು ನೇಲ್ಯಪಲ್ಕೆ ಅವರು ಆಕಸ್ಮಿಕವಾಗಿ ಬೆಂಕಿಗೆ ಬಿದ್ದು ತೀವ್ರವಾಗಿ ಗಾಯಗೊಂಡು, ಮುಖ, ಕಿವಿ ಹಾಗೂ ದೇಹದ ಭಾಗಗಳನ್ನು ಸುಟ್ಟುಕೊಂಡಿದ್ದಾರೆ. ಈ ಸಮಯದಲ್ಲಿ ಬಡ ಕುಟುಂಬದ ಪರಿಸ್ಥಿತಿಯನ್ನು ತಿಳಿದು , ವಿಶ್ವ ಹಿಂದೂ ಪರಿಷತ್ ಬಜರಂಗದಳದ ವೀರ ಕೇಸರಿ ಶಾಖೆ ಮೀಯಾರುಪಲ್ಕೆ ಸರಪಾಡಿಯ ಕಾರ್ಯಕರ್ತರು ದಾನಿಗಳ ನೆರವಿನಿಂದ ₹25,950 ಸಂಗ್ರಹಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

 

 

ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ ಸಂತೋಷ್ ಸರಪಾಡಿ, ಘಟಕ ಸಂಯೋಜಕ ಸುನಿಲ್ ಮೀಯಾರುಪಲ್ಕೆ, ಸಹಸಂಯೋಜಕರಾದ ಜಗದೀಶ್ ಮೀಯಾರುಪಲ್ಕೆ, ಪ್ರಮುಖರಾದ ಚಂದ್ರ ಕೈಯಾಳ, ಶಿವರಾಜ್ ಮಜಲು, ಪ್ರಕಾಶ್ ಕೊಟ್ಟುಂಜ ಮತ್ತು ಇತರರು ಉಪಸ್ಥಿತರಿದ್ದರು.