ಸಿದ್ದು ಸರ್ಕಾರದ ಎರಡನೇ ವಿಕೆಟ್ ಪತನದ ಸಾಧ್ಯತೆ!;ಈ ಬಾರಿ ಯಾವ ಸಚಿವನ ನೆತ್ತಿ ಮೇಲಿದೆ ಗೊತ್ತಾ ತೂಗುಗತ್ತಿ!

  • 25 Nov 2024 11:13:44 AM


ರಿಪಬ್ಲಿಕ್ ಹಿಂದೂ :- ಆರ್ಥಿಕ ಹಿನ್ನಡೆ, ಹಗರಣಗಳ ಹೊಡೆತ, ಜನಾಕ್ರೋಶದಿಂದ ಕಂಗೆಟ್ಟಿರುವ ಸಿದ್ದು ಸರ್ಕಾರದ ಎರಡನೇ ವಿಕೆಟ್ ಪತನವಾಗುವ ಸಾಧ್ಯತೆ ಇದೆ. ಸಂಪುಟದ ಪ್ರಮುಖ ಸಚಿವರೊಬ್ಬರ ರಾಜೀನಾಮೆಗೆ ಸಿದ್ಧತೆ ನಡೆಯುತ್ತಿದೆ ಎನ್ನುವ ಮಾತು ಕಾಂಗ್ರೆಸ್‌ ವಲಯದಿಂದಲೇ ತುಸು ಜೋರಾಗಿ ಕೇಳಲಾರಂಭಿಸಿದೆ. ಈ ಬಗೆಗಿನ ರಿಪೋರ್ಟ್ ಇಲ್ಲಿದೆ.

ಅಬಕಾರಿ ಸಚಿವನ ತಲೆದಂಡ!

ಹೌದು, ಸಿದ್ದರಾಮಯ್ಯ ಸರ್ಕಾರದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರ ತಲೆದಂಡವಾಗುವ ಸಾಧ್ಯತೆ ನಿಚ್ಚಳವಾಗಿದೆ. ಅಬಕಾರಿ ಇಲಾಖೆಯಲ್ಲಿ ನಡೆಯಲಾಗಿದೆ ಎನ್ನಲಾದ ಬರೋಬ್ಬರಿ 700 ಕೋಟಿ ಹಗರಣ ರಾಷ್ಟ್ರ ಮಟ್ಟದಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲಿ ರಾಜ್ಯದ ಈ ಅಬಕಾರಿ ಹಗರಣ ಸದ್ದು ಮಾಡಿತ್ತು. ಇದರಿಂದಾಗಿ ಹೋದಲ್ಲೆಲ್ಲಾ ಭಾರೀ ಮುಖಭಂಗ ಎದುರಿಸಿರುವ ಸರ್ಕಾರ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ‌.

ರಾಜೀನಾಮೆಗೆ ಹೈಕಮಾಂಡ್ ಸೂಚನೆ!

ರಾಜ್ಯದಲ್ಲಿ ನಡೆದಿದೆ ಎನ್ನಲಾದ 700 ಕೋಟಿ ಅಬಕಾರಿ ಹಗರಣದಿಂದಾಗಿ ರಾಷ್ಟ್ರ ಮಟ್ಟದಲ್ಲೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಅವಮಾನವಾಗಿದೆ. ಇದರಿಂದಾಗಿ ಇತ್ತೀಚೆಗೆ ನಡೆದ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆಯಲ್ಲೂ ಕಾಂಗ್ರೆಸ್ ಹಿನ್ನಡೆ ಸಾಧಿಸಿದೆ ಎನ್ನಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ತಕ್ಷಣವೇ ತಿಮ್ಮಾಪುರ್ ರಾಜೀನಾಮೆ ಬಗ್ಗೆ ಸ್ಪಷ್ಟ ನಿಲುವು ತಾಳುವಂತೆ ಸಿದ್ದು ಸರ್ಕಾರಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಸೂಚನೆ ನೀಡಿದೆ.