ಹಿಂದೂ ಮಂದಿರದ ಮೇಲೆ ದಾಳಿ ಮಾಡಿ ಧ್ವಂಸ...!! ಇಸ್ಕಾನ್ ನ್ನು ನಿಷೇಧಿಸುವಂತೆ ಹೈಕೋರ್ಟ್ ಗೆ ಅರ್ಜಿ...!!!!

  • 29 Nov 2024 12:30:41 PM


ಬಾಂಗ್ಲಾದೇಶ: ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರಗಳು ಹೆಚ್ಚಾಗುತ್ತಲೇ ಇದೆ. ಈಗ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬರುವಂತೆ ಅಲ್ಲಿಯ ಸರ್ಕಾರ ವರ್ತಿಸುತ್ತಿದೆ. ಹಿಂದೂಗಳ ಧಾರ್ಮಿಕ ಮಂದಿರಗಳ ಮೇಲೆ ಆಕ್ರಮಣ ನಡೆಸಲಾಗುತ್ತಿದ್ದು ಸಂಪೂರ್ಣವಾಗಿ ಹಿಂದೂಗಳನ್ನು ಹಿಮ್ಮೆಟ್ಟಿಸಲು ಸತತವಾಗಿ ಹುನ್ನಾರಗಳು ನಡೆಯುತ್ತಿದೆ.

ಹಿಂದೂ ಮಂದಿರಗಳ ಮೇಲೆ ದಾಳಿ ಮಾಡಿ ಧ್ವಂಸ...!!

ಬಾಂಗ್ಲಾದೇಶದಲ್ಲಿ ಈಗಾಗಲೇ ಹಿಂದೂ ಧಾರ್ಮಿಕ ಮುಖಂಡ ಹಾಗೂ ಇಸ್ಕಾನ್‌ ಸದಸ್ಯ ಚಿನ್ಮಯ ಕೃಷ್ಣದಾಸ್‌ ಪ್ರಭು ಅವರು ಬಂಧಿಸಲ್ಪಟ್ಟಿದ್ದಾರೆ. ಕುಕೃತ್ಯ ಎಸಗುವ ದುಷ್ಕರ್ಮಿಗಳ ತಂಡವೊಂದು ಸೇರಿಕೊಂಡು ಚಿತ್ತಗಾಂಗ್‌ನ ಫ್ರಿಂಜಿಬಜಾರ್‌ನಲ್ಲಿರುವ ಲೋಕನಾಥ ಮಂದಿರದ ಮೇಲೆ ಆಕ್ರಮಣ ನಡೆಸಿದೆ. ದುಷ್ಕರ್ಮಿಗಳು ದೊಣ್ಣೆ ಹಿಡಿದುಕೊಂಡು ದಾಳಿ ನಡೆಸಿ ಮತ್ತು ಕಲ್ಲು ತೂರಾಟ ನಡೆಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇಸ್ಕಾನ್‌ ಭಾರತ ಘಟಕದ ವಕ್ತಾರ ರಾಧಾರಮಣ ದಾಸ್‌ ಅವರು ಸಾಮಾಜಿಕ ಮಾಧ್ಯಮವಾಸ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋದ ಪೋಸ್ಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಸಂಪುಟ ಸೇರಿಕೊಳ್ಳಲಿರುವ ತುಳಸಿ ಗಬ್ಬಾರ್ಡ್‌ ಅವರಿಗೆ ಟ್ಯಾಗ್‌ ಮಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಶೀಘ್ರವಾಗಿ ಧಾವಿಸಿ ಎಂದು ಮನವಿಯನ್ನು ಕೂಡಾ ಮಾಡಿಕೊಂಡಿದ್ದಾರೆ. ವೀಡಿಯೋ ವೀಕ್ಷಿಸಿದ ಹಿಂದೂಗಳು, ಭಾರತದ ನಾಗರಿಕ ಪ್ರಜೆಗಳು ಇವರ ದುಷ್ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. 

ಖಂಡನೆ ಬಳಿಕ ರಕ್ಷಣೆಗೆ ಬದ್ಧ ಎಂದ ಬಾಂಗ್ಲಾ...!!

ಹಿಂದೂ ಮುಖಂಡನ ಬಂಧನ, ಹಿಂದೂ ಮಂದಿರದ ಮೇಲಿನ ದಾಳಿ ಈ ಎಲ್ಲದರ ಕುರಿತು ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಬಾಂಗ್ಲಾದ ನಡೆಯನ್ನು ಹಲವಾರು ಜನ ತೀವ್ರವಾಗಿ ವಿರೋಧಿಸಿದ್ದಾರೆ. ಭಾರತ ದೇಶ ಕೂಡಾ ಇದನ್ನು ಖಂಡಿಸಿ ಆಕ್ರೋಶವನ್ನು ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಮಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶ ಸರಕಾರವು, ದೇಶದಲ್ಲಿನ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆ ಹಾಗೂ ಭದ್ರತೆಗೆ ನಾವು ಸದಾ ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.