ಈಶ್ವರಮಂಗಲ: ಸರಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ಸ್ಥಳೀಯರಿಂದ ತರಾಟೆ!!!! ಮುಂದೇನಾಯ್ತು??? ನೋಡಿ!!!!

  • 30 Nov 2024 02:26:10 PM


ಈಶ್ವರಮಂಗಲ, ನವೆಂಬರ್ 29: ನೆಟ್ಟಣಿಗೆ ಮುಡ್ನೂರು ಗ್ರಾಮದ ಸುರುಳಿಮೂಲೆ ಎಂಬಲ್ಲಿ ಸರಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ಸ್ಥಳೀಯ ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳನ್ನು ಮತ್ತು ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರ ಪ್ರಕಾರ ದಿನಾಂಕ 29/11/2024 ರಂದು ಜಂಟಿ ಸರ್ವೆ ನಡೆಸುವುದಾಗಿ ಕಂದಾಯ ಇಲಾಖೆ ನಿರ್ಣಯಿಸಿತು.

 

ನಿರ್ಣಯಕ್ಕನುಸಾರವಾಗಿ ಆ ಸ್ಥಳದಲ್ಲಿ ಆರ್ ಐ ಅಧಿಕಾರಿ,ಪಂಚಾಯತ್ ಪಿ ಡಿ ಒ ಹಾಗೂ ಪುತ್ತೂರ್ ತಾಲೂಕಿನ ಸರ್ವೆಯವರು ಬಂದು ಸರ್ವೇ ನಡೆಸಿದ್ದಾರೆ. ಆದರೆ ನಡೆಸಿದ ಸರ್ವೆ ಪರಿಪೂರ್ಣವಾಗಿ ನಡೆದಿಲ್ಲವೆಂದೂ ಬಾಯಿ ಮಾತಿಗೆ ನಮ್ಮನ್ನು ಸಮಾಧಾನಪಡಿಸಲು ಸರ್ವೇ ನಡೆಸಿದವರು ಹಾಗೂ ಆರ್ ಐ ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

ಸೂಕ್ತ ಸರ್ವೆ ನಡೆಸಿ ಅದರ ದಾಖಲಾತಿ ಕೊಡದೆ ಅಲ್ಲಿ ಕಟ್ಟಿರುವ ಅಂಗಡಿಯನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಹಿಂದು ಸಂಘಟನೆ ಕಾರ್ಯಕರ್ತರು ಖಡಾ ಖಂಡಿತವಾಗಿ ತಿಳಿಸಿದ್ದಾರೆ.

ಆದ್ದರಿಂದ ಈ ಅಂಗಡಿಯನ್ನು ತೆರವು ಮಾಡಬೇಕಾದರೆ ಸರಿಯಾದ ಪರಿಶೀಲನೆ ಮಾಡಿ ದಾಖಲೆಗಳನ್ನು ನೀಡಬೇಕೆಂದು ತಿಳಿಸಿದ್ದಾರೆ.

 

ಗ್ರಾಮದಲ್ಲಿ ಹಿಂದೂ ನಂಬಿಕೆ, ಆಚರಣೆ, ವಿಚಾರದಲ್ಲಿ ಇರುವ ಬನ ಇದ್ದ ಸ್ಥಳದ ಹತ್ತಿರ ರಹೀಂ ಅವರಿಗೆ ಸಂಬಂಧಿತ ಅಕ್ರಮ ಕಟ್ಟಡವನ್ನು ತೆರವು ಮಾಡಬೇಕು ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ಈ ಕಟ್ಟಡ ನಿರ್ಮಾಣದಿಂದಲೇ ಗ್ರಾಮದಲ್ಲಿ ಎಲ್ಲಾ ಸಮಸ್ಯೆಗಳು ಉಂಟಾದದ್ದು ಎಂದು ಸ್ಥಳೀಯರು ವಾದಿಸಿದರು.

 

 

ಹಿಂದೆ ನೆಟ್ಟಣಿಗೆ ಮುನ್ನೂರು ಪಂಚಾಯತಿ ಸಭೆಯಲ್ಲಿ ಹೊಸ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದರೆ, ಅದನ್ನು ತೆರವುಗೊಳಿಸಬೇಕು ಎಂದು ನಿರ್ಧಾರ ಮಾಡಲಾಗಿತ್ತು. ಅದರಂತೆಯೇ ರಹೀಂ ಅವರ ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ 

 

 

 

 

ಈ ಸಂದರ್ಭದಲ್ಲಿ ಸ್ಥಳಕ್ಕೆ ಪುತ್ತೂರು ಮಂಡಲದ ಬಿಜೆಪಿ ಅಧ್ಯಕ್ಷರಾಗಿರುವ ದಯಾನಂದ ಉಜಿರೆಮಾರ್ ಮತ್ತು ಹಿಂದೂ ಸಂಘಟನೆಯ ಪ್ರಮುಖರಾದ ಅಕ್ಷಯ್ ರಾಜಪೂತ್ ಕಲ್ಲಡ್ಕ ಅವರು ಭೇಟಿ ನೀಡಿದ್ದಾರೆ. ಗ್ರಾಮದ ಪ್ರಮುಖ ವ್ಯಕ್ತಿಗಳು ಕೂಡ ಇಲ್ಲಿ ಉಪಸ್ಥಿತರಿದ್ದರು.

 

ಅಲ್ಲಿನ ಸ್ಥಳೀಯ ಹಿಂದುಕಾರ್ಯಕರ್ತರು ಈ ವಿಷಯದಲ್ಲಿ ನಡೆಯುವ ಯಾವುದೇ ಸಂಗರ್ಷಕ್ಕೂ ನಾವು ಸಿದ್ಧ ಎಂದು ತಿಳಿಸಿದ್ದಾರೆ. ಕಣ್ಣುಕಟ್ಟಿನ ಸರ್ವೇಯ ಬದಲಾಗಿ ಸರಿಯಾದ ಪರಿಶೀಲನೆಯೊಂದಿಗೆ ಸೂಕ್ತ ಸರ್ವೆ ನಡೆಸಬೇಕೆಂದೂ, ಈ ಸ್ಥಳದ ಹತ್ತಿರವಿದ್ದ ಜಮೀನಿನ ವಾರಿಸಿದರರಿಗೆ ನೋಟಿಸ್ ಕಳುಹಿಸಬೇಕೆಂದೂ, ಪ್ಲೊಟಿಂಗ್ ಹಾಗೂ ವ್ಯವಸ್ಥಿತ ಸರ್ವೇ ನಡೆಸಬೇಕೆಂದು ಹಿಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.