ಬೆಂಗಳೂರು: ಮೀನು ದಂಧೆಯ ಜಾಲಕ್ಕೆ ಸಿಲುಕಿ ಕಂಗಾಲಾಗಿದ್ದಾರೆ ವ್ಯಾಪಾರಸ್ಥರು!!! ದಂಧೆಯ ಹಿಂದೆ ಯಾರು??

  • 30 Nov 2024 03:52:12 PM


ಬೆಂಗಳೂರು: ಬೆಂಗಳೂರಿನಲ್ಲಿ ಇದೀಗ ಮೀನು ದಂಧೆ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಆಂಧ್ರ ,ತಮಿಳುನಾಡು, ಕರ್ನಾಟಕ,ಗೋವಾ ,ಮಹಾರಾಷ್ಟ್ರದಿಂದ ಕಡಲ ತೀರದ ಮೀನುಗಾರರಿಂದ ಟನ್ಗಟ್ಟಲೆ ಮೀನು ತಂದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

 

 ಸುಹೈಲ್ ಪಾಶ ಹಾಗು ಅನಿಲ್ ಎಂಬವರು ಎಲ್ಲ ಮೀನುಗಾರರಿಗೆ ಸಂಪರ್ಕಿಸಿ ಮೀನು ತಂದು ಹಣ ಪಾವತಿ ಮಾಡದೇ ವಂಚಿಸುತಿದ್ದಾರೆ ಎಂಬ ರೋಚಕ ಸುದ್ದಿ ತಿಳಿದು ಬಂದಿದೆ. ಇವರ ಮೋಸದ ಜಾಲಕ್ಕೆ ಸಿಲುಕಿದ ವ್ಯಾಪಾರಸ್ಥರು ಹಲವೆಡೆ ಇದ್ದಾರೆ. ಇವರ ಮೇಲೆ ಆಂಧ್ರ ಪ್ರದೇಶ ದಲ್ಲೂ ಹಲವು ವಂಚನೆಗಳ ಪ್ರಕರಣ ದಾಖಲಾಗಿದೆ ಎಂದು ಹೇಳುತ್ತಾರೆ.

ಇದೀಗ ಇವರು ಬೆಂಗಳೂರಿನಲ್ಲಿ ಫಿಶ್ ಮಿಲ್ ಎಂಬ ವ್ಯಾಪರಸ್ತನಿಗೆ ಕೂಡ 1ಕೋಟಿ ಗೂ ಹೆಚ್ಚು ಹಣ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಫಿಶ್ ಮಿಲ್ ನ ಅಶೋಕ್ ಕುಮಾರ್ ಇವರು ಸೊಹೈಲ್ ಪಾಶ ಹಾಗು ಅನಿಲ್ ಅವರ ಮೇಲೆ ಈಗಾಗಲೇ HSR ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲುಮಾಡಿದ್ದು ವಿಚಾರಣೆ ನಡಿಯುತ್ತಿದೆ , ಆದರೂ ಕೂಡ ಅನಿಲ್ ಹಾಗು ಸುಹೈಲ್ ಎಂಬುವವರು ವಂಚನೆ ನಿಲ್ಲಿಸದೆ RR ಫಿಶ್ ಮಾರ್ಟ್ ಎಂಬ ಹೆಸರಿನಲ್ಲಿ ದಂದೆ ನಡೆಸುತ್ತಲೇ ಇದ್ದಾರೆ. ಮೀನು ತಂದು ಕೊಟ್ಟ ಪ್ಯಾಪಾರಿ ಈಗ ಬೀದಿಗೆ ಬರುವ ಪರಿಸ್ಥಿತಿ ಉಂಟಾಗಿದೆ. 

ಇದಲ್ಲದೆ ರತ್ನಗಿರಿ ಭಾಗದಲ್ಲಿ ಹಲವು ವರ್ಷಗಳಿಂದ ಇವರ ತಂಡ ಮೋಸ ಮಾಡುತ್ತಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ.

 

ಇಂತಹ ದಂಧೆಗಳಿಂದ ಎಲ್ಲ ಕಡಲ ತೀರದ ಮೀನು ವ್ಯಾಪಾರಿಗಳು ಬೆಂಗಳೂರುಗೆ ಮೀನು ಸರಬರಾಜು ಮಾಡಲು ಭಯ ಬೀಳುವ ಪರಿಸ್ಥಿತಿ ಎದುರಾಗಿದೆ.  

ಆಸೀಫ್ ಎಂಬ ಕಾಸರಗೋಡಿನ ಮೀನು ವ್ಯಾಪಾರ ಅನಿಲ್ ಅವರ ಮೋಸದಿಂದ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ಗೆ ಕಾರಣರಾಗಿದ್ದಾರೆ. ಆಸೀಫ್ ಅವ್ರಿಗೆ 15 ಲಕ್ಷ, ಪಾಂಡಿಚೇರಿಯ ವೇಲುಮಣಿ ಅವ್ರಿಗೆ 45 ಲಕ್ಷ ,ಎಂಬಂತೆ ಹಲವರಿಗೆ ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಮಲ್ಪೆ ಹಾಗು ಮಂಗಳೂರು ಬಾಗದ ಹಾಲು ಮೀನು ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಹಾಗು ಹಲವು ಕಡೆ ಇವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.

ಇಂತಹ ದಂಧೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು, ತಮಗುಂಟಾದ ನಷ್ಟಕ್ಕೆ ಪರಿಹರಸಿಗುವಂತೆ ಸಂಭಂದಪಟ್ಟ ಎಲ್ಲಾ ಅಧಿಕಾರಿಗಳಲ್ಲಿ ಮೀನುಗಾರಿಕಾ ವ್ಯಾಪಾರಸ್ಥರು ಕೇಳಿಕೊಂಡಿದ್ದಾರೆ.